ಜನಜಾಗೃತಿ ವೇದಿಕೆ ಸಭೆ : ನೂತನ ಪದಾಧಿಕಾರಿಗಳ ಆಯ್ಕೆ
ಕಾಸರಗೋಡು: ಕಾಸರಗೋಡು, ಮಂಜೇಶ್ವರ ಜನಜಾಗೃತಿ ವೇದಿಕೆಯ ಸಭೆ ಕಾಸರಗೋಡು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಜರಗಿದ್ದು, ದಕ್ಷಿಣಕನ್ನಡ ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಅಧ್ಯಕ್ಷ ಪದ್ಮನಾಭ ಶೆಟ್ಟಿ ಉದ್ಘಾಟಿಸಿದರು. ಮಂಜೇಶ್ವರ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಜಯಪ್ರಕಾಶ್ ನಾರಾಯಣನ್ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ಪ್ರವೀಣ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಸರಗೋಡು ತಾಲೂಕು ಯೋಜನಾಧಿಕಾರಿ ಮುಖೇಶ್ ವರದಿ ಮಂಡಿಸಿದರು. ಗಣೇಶ್ ಆಚಾರ್ಯ ಜನಜಾಗೃತಿ ಕಾರ್ಯಕ್ರಮಗಳ ಕ್ರಿಯಾಯೋಜನೆಯ ವಿವರವನ್ನು ಮಂಡಿಸಿದರು. ಲೋಕಸಭಾ ಚುನಾವಣೆಯಂದು ಮದ್ಯಮುಕ್ತ ಚುನಾವಣೆಯನ್ನಾಗಿ ಮಾಡುವ ಜಾಗೃತಿ ಕರಪತ್ರವನ್ನು ಬಿಡುಗಡೆ ಮಾಡಲಾಯಿತು. ಕಾಸರಗೋಡು ತಾಲೂಕು ಜನಜಾಗೃತಿ ವೇದಿಕೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಅಖಿಲೇಶ್ ನಗುಮುಗಂ, ಉಪಾಧ್ಯಕ್ಷರಾಗಿ ವಾಮನ ಆಚಾರ್ಯ, ಕೋಶಾಧಿಕಾರಿಯಾಗಿ ಶರೀಫ್ ಕೊಡವಂಜಿ ಆಯ್ಕೆಯಾದರು. ಅಶ್ವತ್ಥ್ ಪೂಜಾರಿ ಲಾಲ್ಬಾಗ್, ಶಶಿಕಲಾ ಸುವರ್ಣ, ಉದಯ ಕುಮಾರ್, ಜ್ಞಾನೇಶ ಆಚಾರ್ಯ ಮಾತನಾಡಿದರು. ಹಲವರು ಉಪಸ್ಥಿತರಿದ್ದರು.