ಜ್ಯೋತಿಷ್ ಕುಮಾರ್ ಮೆಮೋರಿಯಲ್ ಟ್ರೋಫಿ ಕಬಡ್ಡಿ ಪಂದ್ಯಾಟ 27ರಂದು
ಕಾಸರಗೋಡು: ಜ್ಯೋತಿಷ್ ಅಭಿಮಾನಿ ಸೇವಾ ಬಳಗ ಕಾಸರ ಗೋಡು ಇದರ ನೇತೃತ್ವದಲ್ಲಿ ಜ್ಯೋತಿಷ್ ಕುಮಾರ್ ಮೆಮೋರಿ ಯಲ್ ಟ್ರೋಫಿ ಅಖಿಲ ಭಾರತ ಮಟ್ಟದ ಆಹ್ವಾನಿತ ಪುರುಷ ಹಾಗೂ ಮಹಿಳಾ ತಂಡಗಳ ಕಬಡ್ಡಿ ಪಂದ್ಯಾಟ ಎಪ್ರಿಲ್ 27ರಂದು ಕಾಸರಗೋಡು ತಾಳಿಪಡ್ಪು ಬಿ.ಟಿ. ವಿಜಯನ್ ಗ್ರೌಂಡ್ನಲ್ಲಿ ನಡೆಯಲಿದೆ. ಅಂದು ಅಪರಾಹ್ನ 3 ಗಂಟೆಗೆ ಪಂದ್ಯಾಟ ಆರಂಭಗೊಳ್ಳಲಿದೆ. ಉದ್ಯಮಿ ಡಾ. ಕೆ. ಸದಾಶಿವ ಶೆಟ್ಟಿ ಕುಳೂರು ಉದ್ಘಾಟಿಸುವರು.
ಜ್ಯೋತಿಷ್ ಅಭಿಮಾನಿ ಸೇವಾ ಬಳಗದ ಅಧ್ಯಕ್ಷ ಜಯರಾಜ ಶೆಟ್ಟಿ ಕುಳೂರು ಅಧ್ಯಕ್ಷತೆ ವಹಿಸುವರು. ಗಣ್ಯರು ಸಹಿತ ಹಲವರು ಉಪಸ್ಥಿತರಿ ರುವರು. ವಿಜೇತ ಪುರುಷ ತಂಡಗಳಿಗೆ ಪ್ರಥಮ ಬಹುಮಾನವಾಗಿ ರೂ. 44,444, ದ್ವಿತೀಯ ರೂ. 22,222, ತೃತೀಯ ಹಾಗೂ ಚತುರ್ಥ ರೂ. 11,111, ಮಹಿಳಾ ತಂಡಗಳಿಗೆ ಪ್ರಥಮ ರೂ. 10,000, ದ್ವಿತೀಯ ರೂ. 5000, ತೃತೀಯ ಹಾಗೂ ಚತುರ್ಥ ರೂ. 2000 ನೀಡಲಾಗುವುದೆಂದು ತಿಳಿಸಲಾಗಿದೆ.