ತಲೆಹೊರೆ ಕಾರ್ಮಿಕ ಕೆಲಸ ಮಧ್ಯೆ ಕುಸಿದು ಬಿದ್ದು ಮೃತ್ಯು

ಕಾಸರಗೋಡು: ಪಿಲಿಕ್ಕೋಡ್ ನಿವಾಸಿಯಾದ ತಲೆಹೊರೆ ಕಾರ್ಮಿಕ ಮಂಗಳೂರಿನಲ್ಲಿ ಕೆಲಸ ಮಧ್ಯೆ ಕುಸಿದು ಬಿದ್ದು ಮೃತಪಟ್ಟರು. ಪಿಲಿಕ್ಕೋಡ್ ಕಣಂಕೈ ನಿವಾಸಿ ದಿ| ಮಾಮುನಿ ವೆಳ್ತಂಬು- ಕಪ್ಪಣ ಕ್ಕಾಲ್ ಚಿರಿ ಎಂಬಿವರ ಪುತ್ರ ಕೆ. ಸಜೀವನ್ (47) ಮೃತಪಟ್ಟ ವ್ಯಕ್ತಿ. ಬೀಡಿ ಕಂಪೆನಿಯ ತಲೆಹೊರೆ ಕಾರ್ಮಿಕನಾದ ಸಜೀವನ್ ನಿನ್ನೆ ಬೆಳಿಗ್ಗೆ ಕೆಲಸಕ್ಕೆ ತಲುಪಿದಾಗ ಕುಸಿದು ಬಿದ್ದಿದ್ದಾರೆ. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತರು ಪತ್ನಿ ಸಜಿತ, ಮಕ್ಕಳಾದ ಸಾಗರ್, ಪಾರ್ವಣ, ಸಹೋದರ- ಸಹೋದರಿಯರಾದ ನಳಿನಿ, ಸತೀಶನ್ (ಪಿಲಿಕ್ಕೋಡ್ ಸೇವಾ ಸಹಕಾರಿ ಬ್ಯಾಂಕ್), ಶೈಲಜಾ, ಸಜಿತ್ (ಪಡನ್ನದಲ್ಲಿ ತಲೆಹೊರೆ ಕಾರ್ಮಿಕ), ನಿಶಾಂತ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page