ತಿರುಪತಿ: ತಂದೆ ತಾಯಿ ಜೊತೆ ನಡೆದು ಹೋಗುತ್ತಿದ್ದ ಬಾಲಕಿ ಚಿರತೆಯ ಆಕ್ರಮಣಕ್ಕೆ ಬಲಿ

ಹೈದರಾಬಾದ್: ತಿರುಪತಿಗೆ ತೀರ್ಥಾಟನೆಗೆ ತಲುಪಿದ ಆರರ ಹರೆಯದ ಬಾಲಕಿಯನ್ನು ಚಿರತೆ ಆಕ್ರಮಿಸಿ ಕೊಂದ ದಾರುಣ ಘಟನೆ ನಡೆದಿದೆ.

ಆಂಧ್ರ ನಿವಾಸಿ ಲಕ್ಷಿತ ಎಂಬ ಬಾಲಕಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ನಿನ್ನೆ ಸಂಜೆ ಆಲಿಪಿರಿವಾಕ್ ವೇನಲ್ಲಿ  ಘಟನೆ ನಡೆದಿದೆ. ತಂದೆ ತಾಯಿ ಜೊತೆ ಬಾಲಕಿ ನಡೆದು ಹೋಗುತ್ತಿದ್ದಂತೆ ಚಿರತೆ ದಾಳಿ ನಡೆಸಿದೆ. ಚಿರತೆ ಬಾಲಕಿಯನ್ನು ಕಚ್ಚಿ ಕಾಡಿನತ್ತ  ಎಳೆದೊಯ್ದಿದೆ. ಪೊಲೀಸರು ತಲುಪಿ ನಡೆಸಿದ ಶೋಧ ವೇಳೆ  ಬಾಲಕಿಯ  ಮೃತದೇಹದ ಅವಶಿಷ್ಟಗಳು ಕಾಡಿನಲ್ಲಿ ಪತ್ತೆಯಾಗಿದೆ.  ಕಳೆದ ತಿಂಗಳು ಕೂಡಾ ತಿರುಪತಿಯಲ್ಲಿ ಒಂದು ಮಗುವಿನ ಮೇಲೆ  ಚಿರತೆ ಆಕ್ರಮಿಸಿತ್ತು.

Leave a Reply

Your email address will not be published. Required fields are marked *

You cannot copy content of this page