ದೃಷ್ಟಿದೋಷ ಹೊಂದಿದ ಬಡ ಕುಟುಂಬದ ಮನೆ ಬೆಂಕಿಗಾಹುತಿ: ಅಪಾರ ನಾಶನಷ್ಟ

ಮಂಜೇಶ್ವರ: ಬಡಕುಂಟAಬದ ಹೆಂಚು ಹಾಸಿದ ಮನೆಯೊಂದು ಬೆಂಕಿಗಾಹುತಿಯಾಗಿ ಅಪಾರ ನಾಶ ನಷ್ಟ ಸಂಭವಿಸಿದ ಘಟನೆ ನಡೆದಿದೆ. ವರ್ಕಾಡಿ ಪಂಚಾಯತ್‌ನ 15ನೇ ವಾರ್ಡ್ ತಚ್ಚಿರೆ ನಿವಾಸಿ ಅಬ್ದುಲ್ ಕಾದರ್ ಎಂಬವರ ಮನೆ ಭಾನುವಾರ ರಾತ್ರಿ ಸುಮಾರು 8ಗಂಟೆಗೆ ಬೆಂಕಿ ತಗಲಿ ಉರಿದಿದೆ. ವಿದ್ಯುತ್ ಶಾಟ್ ಸರ್ಕೀಟ್‌ನಿಂದ ಬೆಂಕಿ ತಗಲಿರುವುದಾಗಿ ಅಂದಾಜಿಸಲಾಗಿದೆ. ದೃಷ್ಟಿ ದೋಷದಿಂದ ಬಳಲುತ್ತಿರುವ ಅಬ್ದುಲ್ ಕಾದರ್ ಹಾಗೂ ಅವರ ಸಹೋದರಿ ನೆಬೀಸ ಮನೆಯಲ್ಲಿದ್ದರು. ಬೆಂಕಿ ತಗಲಿದ ಬಗ್ಗೆ ತಿಳಿದು ಹೊರಗಡೆ ಓಡಿ ಬೊಬ್ಬೆ ಹಾಕಿದ್ದಾರೆ. ಸ್ಥಳಕ್ಕೆ ಸ್ಥಳೀಯರು ಹಾಗೂ ಉಪ್ಪಳ ಅಗ್ನಿ ಶಾಮಕದಳ ತಲುಪಿ ಬೆಂಕಿಯನ್ನು ನಂದಿಸಿದ್ದಾರೆ. ಆದರೆ ಮೇಲ್ಚಾವಣಿ ಪೂರ್ತಿ ಉರಿದು ನಾಶಗೊಂಡಿದೆ. ಅಲ್ಲದೆ ಮನೆಯಲ್ಲಿದ್ದ ವಿದ್ಯುತ್ ಉಪಕರಣಗಳು, ಕಪಾಟ್, ವಯರಿಂಗ್, ಹಣ, ದಾಖಲೆ ಪತ್ರಗಳು ಉರಿದುಹೋಗಿದೆ. ಸುಮಾರು 3ಲಕ್ಷ ರೂ ನಾಶ ನಷ್ಟಅಂದಾಜಿಸಲಾಗಿದೆ. ಇದರಿಂದ ಬಡಕುಟುಂಬ ಸಂಕಷ್ಟಕ್ಕೀಡಾಗಿದೆ.

RELATED NEWS

You cannot copy contents of this page