ಧನ್ರಾಜ್ ಪ್ರತಾಪನಗರ ಸ್ಮರಣಾರ್ಥ ದೈಗೋಳಿ ಸೇವಾಶ್ರಮಕ್ಕೆ ನಿಧಿ ಹಸ್ತಾಂತರ
ಮಂಗಲ್ಪಾಡಿ: ಧನ್ರಾಜ್ ಪ್ರತಾಪನಗರ ಅವರ ಸ್ಮರಣಾರ್ಥ ದೈಗೋಳಿ ಶ್ರೀ ಸಾಯಿನಿಖೇತನ ಸೇವಾಶ್ರಮಕ್ಕೆ ನಿಧಿ ಹಸ್ತಾಂತರಿಸಲಾಯಿತು. ಪ್ರತಾಪನಗರದ ಯಕ್ಷಪ್ರತಾಪ ಕಾರ್ಯಕ್ರಮದಂಗವಾಗಿ ಹನುಮಗಿರಿ ಮೇಳದವರಿಂದ ನಡೆದ ಯಕ್ಷಗಾನ ಪ್ರದರ್ಶನ ಸಂದರ್ಭದಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದ್ದು, ಸೇವಾಶ್ರಮದ ಸ್ಥಾಪಕ ಡಾ. ಉದಯ ಕುಮಾರ್ ನೂಜಿ ಅವರಿಗೆ ನಿಧಿ ಹಸ್ತಾಂತರಿಸಲಾಯಿತು.
ಕರ್ನಾಟಕ ಮಾನವಹಕ್ಕುಗಳ ಅಧ್ಯಕ್ಷರಾಗಿದ್ದ ಡಾ. ಟಿ. ಶ್ಯಾಮ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಿರಣ್ ಕುಮಾರ್, ಉದ್ಯಮಿ ಕಾರ್ತಿಕ್ ಸಾಲಿಯಾನ್ ಉಪಸ್ಥಿತರಿದ್ದರು. ಹನುಮಗಿರಿ ಮೇಳದವರಿಂದ ಸಹಸ್ರ ಕವಚ- ಕೃಷ್ಣಾರ್ಜುನ- ಬಬ್ರುವಾಹನ ಯಕ್ಷಗಾನ ಪ್ರದರ್ಶನಗೊಂಡಿತು.