ನೆಟ್ಟಣಿಗೆ ದೇವಸ್ಥಾನದಲ್ಲಿ ಶ್ರೀ ಭೂತ ಬಲಿ ಉತ್ಸವ 30ರಿಂದ

ಮುಳ್ಳೇರಿಯ: ನೆಟ್ಟಣಿಗೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಶ್ರೀ ಭೂತಬಲಿ ಉತ್ಸವ ಎಪ್ರಿಲ್ 30ರಿಂದ ನಡೆಯಲಿದೆ. 30ರಂದು ರಾತ್ರಿ ಉಗ್ರಾಣ ತುಂಬಿಸುವುದು, ಹುಲಿಭೂತ, ಧೂಮಾವತಿ, ಪಟ್ಟದ ಅರಸ, ಬೀರ್ನಾಳ್ವ ಗುಳಿಗ ದೈವಗಳಿಗೆ ತಂಬಿಲ ಸೇವೆ, ಮೇ 1ರಂದು ಬೆಳಿಗ್ಗೆ ಏಕಾದಶ ರುದ್ರ ಪೂಜೆ, ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ, ರಾತ್ರಿ 7.30ಕ್ಕೆ ಶ್ರೀ ದೇವರ ಶೃಂಗಾರ ಬಲಿ ಉತ್ಸವ, ಅನ್ನ ಸಂತರ್ಪಣೆ, ೨ರಂದು ಬೆಳಿಗ್ಗೆ ೯ಕ್ಕೆ ಶ್ರೀ ದೇವರ ದರ್ಶನ ಬಲಿ, ಬಟ್ಲು ಕಾಣಿಕೆ, ಅನ್ನ ಸಂತರ್ಪಣೆ ನಡೆಯ ಲಿದೆ. ತುಲಾಭಾರ ಸೇವೆಗೆ ಮುಂಚಿತ ವಾಗಿ ತಿಳಿಸಬೇಕೆಂದು ಕ್ಷೇತ್ರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

RELATED NEWS

You cannot copy contents of this page