ಪಹಲ್ಗಾಮ್‌ನಲ್ಲಿ ಮೃತಪಟ್ಟ ಪ್ರವಾಸಿಗರಿಗೆ ಕಾಂಗ್ರೆಸ್‌ನಿಂದ ಕುಂಬಳೆಯಲ್ಲಿ ಶ್ರದ್ಧಾಂಜಲಿ

ಕುಂಬಳೆ: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರಗಾಮಿ ಗಳ ಆಕ್ರಮಣದಲ್ಲಿ ಮೃತಪಟ್ಟ ಪ್ರವಾಸಿಗರಿಗೆ ಕುಂಬಳೆ ಬ್ಲೋಕ್ ಕಾಂಗ್ರೆಸ್, ಭಾರತೀಯ ಯುವ ಕಾಂಗ್ರೆಸ್ ಮೌನ ಮೆರವಣಿಗೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಿದೆ. ಬ್ಲೋಕ್ ಕಾಂಗ್ರೆಸ್ ನಿಯುಕ್ತ ಅಧ್ಯಕ್ಷ ಸುಂದರ ಆರಿಕ್ಕಾಡಿ ಅಧ್ಯಕ್ಷತೆ ವಹಿಸಿದರು. ಲಕ್ಷ್ಮಣಪ್ರಭು, ಮಂಡಲ ಅಧ್ಯಕ್ಷ ರವಿ ಪೂಜಾರಿ, ಸತ್ಯನ್ ಉಪ್ಪಳ, ಜುನೈದ್ ಉರ್ಮಿ, ಸಜಿ ಪೈವಳಿಕೆ, ಕಮರುದ್ದೀನ್ ಪಾಡಲಡ್ಕ, ಕೇಶವ ದರ್ಬಾರ್‌ಕಟ್ಟೆ ಮಾತನಾಡಿ ಉಗ್ರಗಾಮಿಗಳ ಕೃತ್ಯವನ್ನು ಖಂಡಿಸಿ ದರು. ಥೋಮಸ್ ರೋಡ್ರಿಗಸ್, ಡಾಲ್ಫಿ ಡಿ’ಸೋಜ, ಮೋಹನ್ ರೈ ಕಯ್ಯಾರು, ಸಚ್ಚಿದಾನಂದ ಶೆಟ್ಟಿ ಕಳ್ಳಿಗೆ, ಶೆರಿಲ್ ಕಯ್ಯಂಕೂಡೇಲ್,  ದಯಾನಂದ ಬಾಡೂರು, ರಫೀಕ್ ಕುಂಟಾರು, ಮೊಹಮ್ಮದ್ ಪುತ್ತಿಗೆ, ಮಹರಾಜ ಪೈವಳಿಕೆ, ಹರೀಶ್ ಮುಳಿಯಡ್ಕ, ಜಯಂತ ಕುಂಟಂ ಗೇರಡ್ಕ, ರವಿರಾಜ್ ಕುಂಟಂಗೇರಡ್ಕ, ದಿನೇಶ್, ಲತೀಫ್, ಹಂಸ, ಮಾನ ಪಾಟಾಳಿ ಮೊದಲಾದವರು ಭಾಗವಹಿಸಿದರು. ಬ್ಲೋಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪೃಥ್ವಿರಾಜ್ ಶೆಟ್ಟಿ ಸ್ವಾಗತಿಸಿ, ಮಂಡಲ ಕಾರ್ಯದರ್ಶಿ ಉಮೇಶ್ ವಂದಿಸಿದರು.

Leave a Reply

Your email address will not be published. Required fields are marked *

You cannot copy content of this page