ಪಹಲ್ಗಾಮ್ ಉಗ್ರರ ದಾಳಿ ದೇಶದ್ರೋಹ ಹೇಳಿಕೆ ನೀಡಿದ ಆರೋಪ: ಮುಸ್ಲಿಂ ಲೀಗ್ ನೇತಾರನ ವಿರುದ್ಧ ಕೇಸು ದಾಖಲು

ಕಾಸರಗೋಡು: ಜಮ್ಮು ಕಾಶ್ಮೀರದ  ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಸಂಬಂಧಿಸಿ ಮುಸ್ಲಿಂ ಲೀಗ್ ನೇತಾರ ಬಶೀರ್ ವೆಳ್ಳಿಕೋತ್ ದೇಶದ್ರೋಹ ಹೇಳಿಕೆ ನೀಡಿರುವುದಾಗಿ ಆರೋಪವುಂಟಾಗಿದೆ.

ಹಿಂದೂ ಐಕ್ಯವೇದಿ ಕಾಸರಗೋ ಡು ಜಿಲ್ಲಾ ಅಧ್ಯಕ್ಷ ಎಸ್.ಪಿ.ಶಾಜಿ  ನೀಡಿದ ದೂರಿನಂತೆ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ಭಾರತೀಯ ನಾಗರಿಕಾ ಸುರಕ್ಷಾ ಸಂಹಿತೆ 173 ಪ್ರಕಾರ ಕೇಸು ದಾಖಲಿಸಲಾಗಿದೆ.

ಎಪ್ರಿಲ್ 23ರಂದು ಸಂಜೆ 6.30ಕ್ಕೆ ದೂರುಗಾರನಿಗೆ ಲಭಿಸಿದ ಫೇಸ್ ಬುಕ್ ಹೇಳಿಕೆಯನ್ನು ಪುರಾವೆ ಯಾಗಿಸಿ ಕೇಸು ದಾಖಲಾಗಿದೆ. ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಸಂಬಂಧಿಸಿ ದೇಶದ್ರೋಹ ಹಾಗೂ ಗಲಭೆ ಸೃಷ್ಟಿಸಲಿರುವ ಉದ್ದೇಶದೊಂದಿಗೆ ಕೆಲವು ಹೇಳಿಕೆ ನೀಡಲಾಗಿದೆ ಎಂದು ಹೊಸದುರ್ಗ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ.  ಇದೇ ವೇಳೆ ವಿವಾದಿತ ಹೇಳಿಕೆಯನ್ನು ಬಶೀರ್ ವೆಳ್ಳಿಕೋತ್ ಬಳಿಕ ಹಿಂತೆಗೆದುಕೊಂಡಿರುವುದಾಗಿ ಹೇಳಲಾಗುತ್ತಿದೆ. ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ಬಳಿಕ ಸಾಮಾಜಿಕ ಜಾಲತಾಣಗಳ ಮೇಲೆ ವಿವಿಧ ಇಂಟೆಲಿಜೆನ್ಸ್ ತನಿಖಾ ತಂಡಗಳು ತೀವ್ರ ನಿಗಾ ಇರಿಸಿದೆ. ಈ ಮಧ್ಯೆ ಬಶೀರ್ ವೆಳ್ಳಿಕೋತ್ ನೀಡಿದ ಹೇಳಿಕೆ ವಿವಾದಕ್ಕೆಡೆಯಾಗಿದೆ.

Leave a Reply

Your email address will not be published. Required fields are marked *

You cannot copy content of this page