ಪೆರಿಯಾಟಡ್ಕದ ಯುವ ಜ್ಯೋತಿಷಿ ನೇಣು

ಪೆರಿಯ:  ಪೆರಿಯಾಟಡ್ಕದ ಯುವ ಜ್ಯೋತಿಷಿ ನೇಣುಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಹಚ್ಚಲಾ ಗಿದ್ದಾರೆ. ಪೆರಿಯಾಟಡ್ಕದ  ಸುಕುಮಾರನ್-ಪುಷ್ಪಾ ದಂಪತಿ ಪುತ್ರ ಬಿಕೇಶ್ (27) ಆತ್ಮಹತ್ಯೆಗೈದವರು. ಇಂದು ಮುಂಜಾನೆ ಮಲಗುವ ಕೊಠಡಿಯಲ್ಲಿ  ನೇಣುಬಿಗಿದಸ್ಥಿತಿ ಯಲ್ಲಿ ಮೃತದೇಹ ಪತ್ತೆಹಚ್ಚಲಾಗಿದೆ. ಆತ್ಮಹತ್ಯೆಗೆ ಕಾರಣವೇನೆಂದು ಸ್ಪಷ್ಟವಾಗಿಲ್ಲ. ಬೇಕಲ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮೃತದೇಹವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾವರದಲ್ಲಿರಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page