ಪೆರಿಯಾಟಡ್ಕದ ಯುವ ಜ್ಯೋತಿಷಿ ನೇಣು
ಪೆರಿಯ: ಪೆರಿಯಾಟಡ್ಕದ ಯುವ ಜ್ಯೋತಿಷಿ ನೇಣುಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಹಚ್ಚಲಾ ಗಿದ್ದಾರೆ. ಪೆರಿಯಾಟಡ್ಕದ ಸುಕುಮಾರನ್-ಪುಷ್ಪಾ ದಂಪತಿ ಪುತ್ರ ಬಿಕೇಶ್ (27) ಆತ್ಮಹತ್ಯೆಗೈದವರು. ಇಂದು ಮುಂಜಾನೆ ಮಲಗುವ ಕೊಠಡಿಯಲ್ಲಿ ನೇಣುಬಿಗಿದಸ್ಥಿತಿ ಯಲ್ಲಿ ಮೃತದೇಹ ಪತ್ತೆಹಚ್ಚಲಾಗಿದೆ. ಆತ್ಮಹತ್ಯೆಗೆ ಕಾರಣವೇನೆಂದು ಸ್ಪಷ್ಟವಾಗಿಲ್ಲ. ಬೇಕಲ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮೃತದೇಹವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾವರದಲ್ಲಿರಿಸಲಾಗಿದೆ.