ಪ್ರತಿಭಾ ಕೇಂದ್ರಗಳ ಪ್ರತಿಭೋತ್ಸವ, ವಿಜಯೋತ್ಸವ

ಬಂದ್ಯೋಡು: ಎಸ್ ಎಸ್ ಕೆ ಕಾಸರಗೋಡು ಇದರ ನೇತೃತ್ವದಲ್ಲಿ ಬಿ ಆರ್‌ಸಿ ಮಂಜೇಶ್ವರ ವತಿಯಿಂದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಪ್ರತಿಭೋತ್ಸವ ಹಾಗೂ ವಿಜಯೋತ್ಸವ ಕಾರ್ಯಕ್ರಮ ಬಂದ್ಯೋಡು ಪ್ರತಿಭಾ ಕೇಂದ್ರದಲ್ಲಿ ಜರಗಿತು. ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕೆÀ್ಷ ಶಮೀನಾ ಟೀಚರ್ ಉದ್ಘಾಟಿಸಿದರು. ವಾರ್ಡ್ ಪ್ರತಿನಿಧಿ ಕಿಶೋರ್ ಅಧ್ಯಕ್ಷತೆ ವಹಿಸಿ ದರು. ಬಿ ಪಿ ಸಿ ವಿಜಯ್ ಕುಮಾರ್ ಪಾವಳ, ಜೋಯ್, ವಾರ್ಡ್ ಪ್ರತಿನಿಧಿ ಬಾಬು ಬಂದ್ಯೋಡು, ಅಶೋಕ್ ಕೊಡ್ಲಮೊಗರು, ನೆಟ್ಟೋನಿ ಬಂದ್ಯೋಡು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಉಪಜಿಲ್ಲಾ, ಜಿಲ್ಲಾ ಹಾಗೂ ರಾಜ್ಯ ಮಟ್ಟದ ವಿವಿಧ ಮೇಳಗಳಲ್ಲಿ ವಿಜೇತರಾದ ಪ್ರತಿಭೆಗಳನ್ನು ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ತಿಲಕ ಟೀಚರ್ ಸ್ವಾಗತಿಸಿ, ಸುಮ ಟೀಚರ್ ವಂದಿಸಿದರು. ದಿವ್ಯಾ ಟೀಚರ್ ನಿರೂಪಿಸಿದರು. ತದನಂತರ ಮಕ್ಕಳಿಗೆ ಹಾಗೂ ರಕ್ಷಕರಿಗೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು. ಬಿ ಆರ್ ಸಿ ಟ್ರೈನರ್‌ಗಳಾದ ಶ್ಯಾಮಲಾ ಟೀಚರ್, ಮೋಹಿನಿ ಟೀಚರ್, ವಿದ್ಯಾ ಟೀಚರ್, ಪ್ರಸನ್ನಾ ಟೀಚರ್, ಪ್ರಕಾಶ್ ಮಾಸ್ಟರ್ ಮೊಯಿದಿನ್ ಮಾಸ್ಟರ್ ನೇತೃತ್ವ ನೀಡಿದರು.

Leave a Reply

Your email address will not be published. Required fields are marked *

You cannot copy content of this page