ಪ್ಲಾಂಟೇಶನ್ ಕಾರ್ಪೊರೇಶನ್ನ ಸ್ಥಳದಲ್ಲಿ ತ್ಯಾಜ್ಯ ಸುಟ್ಟು, ಮಲಿನ ಜಲ ಹರಿಯಬಿಟ್ಟ ಹಿನ್ನೆಲೆಯಲ್ಲಿ ಎನ್ಪೋರ್ಸ್ಮೆಂಟ್ನಿಂದ ದಂಡ
ಕಾಸರಗೋಡು: ಪ್ಲಾಂಟೇಶನ್ ಕಾರ್ಪೊರೇಶನ್ನ ಮುಳಿಯಾರು ಡಿವಿಶನ್ ಅಧೀನದಲ್ಲಿರುವ ಬಾವಿಕ್ಕರೆ ಎಸ್ಟೇಟ್ಗೆ ಅಪಾರ್ಟ್ ಮೆಂಟ್ನಿಂದಿರುವ ಮಲಿನ ಜಲವನ್ನು ಹರಿಯ ಬಿಟ್ಟಿರುವುದಕ್ಕೆ, ತ್ಯಾಜ್ಯಗಳನ್ನು ರಾಶಿ ಹಾಕಿ ಸುಟ್ಟಿರುವ ಹಿನ್ನೆಲೆಯಲ್ಲಿ ಮುದಲಪ್ಪಾರೆಯ ಅಪಾರ್ಟ್ಮೆಂಟ್ ಮಾಲಕನಿಂದ ೧೫ ಸಾವಿರ ರೂ. ದಂಡ ವಸೂಲು ಮಾಡಲಾಗಿದೆ. ಇದೇ ಸ್ಥಳದಲ್ಲಿ ತ್ಯಾಜ್ಯ ಉಪೇಕ್ಷಿಸಿದ ವ್ಯಕ್ತಿಯೊಬ್ಬರಿಂದ ೫ ಸಾವಿರ ರೂ.ವನ್ನು ದಂಡವಾಗಿ ವಸೂಲು ಮಾಡಲಾಗಿದೆ. ಜಲಮೂಲಗಳಿಗೆ ವಿವಾಹ ಮನೆ ಗಳಿಂದಿರುವ ಅವಶಿಷ್ಟಗಳನ್ನು ತಂದು ಹಾಕಿರುವುದು, ತ್ಯಾಜ್ಯಗಳನ್ನು ಉರಿಸಿದ ಬಗ್ಗೆ ಲಭಿಸಿದ ವ್ಯಾಪಕ ದೂರಿನ ಹಿನ್ನೆಲೆಯಲ್ಲಿ ತಪಾಸಣೆ ನಡೆಸಿದಾಗ ಘಟನೆ ಪತ್ತೆಹಚ್ಚಲಾಗಿದ್ದು, ಈ ಸಂಬಂಧ ೫ ಸಾವಿರ ರೂ. ದಂಡ ವಸೂಲು ಮಾಡಲಾಗಿದೆ. ಸ್ಥಳವನ್ನು ಸಂರಕ್ಷಿಸಿ ಮುನ್ನೆಚ್ಚರಿಕೆ ಬೋರ್ಡ್ಗಳನ್ನು ಸ್ಥಾಪಿಸುವುದಕ್ಕೆ ಉದ್ಯೋಗ ಖಾತರಿಯಂತಹ ಯೋಜನೆಗಳನ್ನು ಉಪಯೋಗಿಸಿ ಕೆಂಪು ಕಲ್ಲು ಕೋರೆಗಳನ್ನು ಜಲ ಸಂರಕ್ಷಣಾ ಘಟಕಗಳಾಗಿ ಬದಲಿಸಲು ಕಾರ್ಪೊರೇಶನ್ನ ಮೆನೇಜರ್ಗೆ ನಿರ್ದೇಶ ನೀಡಲಾಯಿತು.
೮ನೇ ಮೈಲಿನಲ್ಲಿ ಸರ್ವೀಸ್ ಸೆಂಟರ್ನಿಂದಿರುವ ಉಪಯೋಗ ಶೂನ್ಯ ಜಲವನ್ನು ಸಾರ್ವಜನಿಕ ಸ್ಥಳಕ್ಕೆ ಹರಿಯಬಿಟ್ಟಿರುವುದಕ್ಕೆ, ಅಪಾರ್ಟ್ಮೆಂಟ್ನಿಂದ ಪ್ಲಾಸ್ಟಿಕ್ ಸಹಿತದ ತ್ಯಾಜ್ಯಗಳನ್ನು ಉರಿಸಿರುವ ಹಿನ್ನೆಲೆಯಲ್ಲಿ ಕಟ್ಟಡ ಮಾಲಕರಿಗೂ ದಂಡ ವಿಧಿಸಲಾಗಿದೆ. ತಪಾಸಣೆ ತಂಡದಲ್ಲಿ ಜಿಲ್ಲಾ ಎನ್ ಫೋರ್ಸ್ಮೆಂಟ್ ಸ್ಕ್ವಾಡ್ ಲೀಡರ್ ಕೆ.ವಿ. ಮುಹಮ್ಮದ್ ಮದನಿ, ಹೆಲ್ತ್ ಇನ್ಸ್ಪೆಕ್ಟರ್ ಸಜಿತಾ ಎಂ., ಫಾಸಿಲ್ ಇ.ಕೆ. ಎಂಬಿವರಿದ್ದರು.