ಬಂದ್ಯೋಡಿನಲ್ಲಿ ಬಿಜೆಪಿಯಿಂದ ಜನ ಪಂಚಾಯತ್ ಸಾರ್ವಜನಿಕ ಸಭೆ ೨೫ರಂದು

ಉಪ್ಪಳ: ಕೇಂದ್ರ ಸರಕಾರದ ಯೋಜನೆಯ ವಿವರ ಮತ್ತು ಕೇರಳ ಸರಕಾರದ ಜನ ವಿರೋಧಿ ನೀತಿ, ಆಡಳಿತ ವೈಫಲ್ಯದ ವಿರುದ್ದ ಭಾರತೀಯ ಜನತಾ ಪಕ್ಷ ಮಂಗಲ್ಪಾಡಿ ಪಂಚಾಯತ್ ಸಮಿತಿ ಆಶ್ರಯದಲ್ಲಿ ಬಿಜೆಪಿ ಜನ ಪಂಚಾಯತ್ ಸಾರ್ವಜನಿಕ ಸಭೆ ಈ ತಿಂಗಳ 25ರಂದು ಸಂಜೆ 4ಗಂಟೆಗೆ ಬಂದ್ಯೋಡಿನಲ್ಲಿ ನಡೆಯಲಿದೆ. ಬಿಜೆಪಿ ರಾಜ್ಯ ಉಪಾಧ್ಯಾಕ್ಷ ಅಡ್ವಕೇಟ್ ಪ್ರಕಾಶ್ ಬಾಬು ಪ್ರಧಾನ ಭಾಷಣ ಮಾಡುವರು.
ಪಕ್ಷದ ಕಾರ್ಯಕರ್ತರು, ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊ ಳಿಸಬೇಕೆಂದು ಬಿಜೆಪಿ ಪಂಚಾಯತ್ ಸಮಿತಿ ಪದಾಧಿಕಾರಿಗಳು ವಿನಂತಿಸಿದ್ದಾರೆ.

You cannot copy contents of this page