ಬದಿಯಡ್ಕ ಠಾಣೆಗೆ ವಿ.ಹಿಂ.ಪ ಮಾರ್ಚ್ 200 ಮಂದಿ ವಿರುದ್ಧ ಕೇಸು

ಬದಿಯಡ್ಕ: ವಿಶ್ವಹಿಂದೂ ಪರಿಷತ್ ನೇತೃತ್ವದಲ್ಲಿ ಬದಿಯಡ್ಕ ಪೊಲೀಸ್ ಠಾಣೆಗೆ ನಡೆದ ಮಾರ್ಚ್‌ಗೆ ಸಂಬಂಧಿಸಿ ೨೦೦ ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ನಾರಂಪಾಡಿ, ಜಿಲ್ಲಾ ಪದಾಧಿಕಾರಿ ಸುಧಾಮ ಗೋಸಾಡ, ಹಿಂದೂ ಐಕ್ಯವೇದಿ ರಾಜ್ಯ ಕಾರ್ಯದರ್ಶಿ ಶ್ಯಾಂ ಮೋಹನ್, ಅವಿನಾಶ್ ರೈ, ಅಕ್ಷಯ್ ಅಡ್ಯನಡ್ಕ ಸಹಿತ  200 ಮಂದಿ ವಿರುದ್ಧ ಕೇಸು ದಾಖಲಿಸಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬದಿಯಡ್ಕ ಪೊಲೀಸರು ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ, ಲವ್‌ಜಿಹಾದ್‌ಗೆ ಪೊಲೀಸರು ಸಹಾಯ ಒದಗಿಸುತ್ತಿದ್ದಾರೆಂದು ಆರೋಪಿಸಿ ವಿಹಿಂಪ ಬದಿಯಡ್ಕ ಪ್ರಖಂಡ ನೇತೃತ್ವದಲ್ಲಿ ಶನಿವಾರ ಮಾರ್ಚ್ ನಡೆಸಲಾಗಿತ್ತು.

RELATED NEWS

You cannot copy contents of this page