ಬಸ್‌ನಲ್ಲಿ ಸಾಗಿಸುತ್ತಿದ್ದ 30 ಕಿಲೋ ಶ್ರೀಗಂಧದ ಕೊರಡು ವಶ: ಓರ್ವ ಸೆರೆ

ಮಂಜೇಶ್ವರ: ಕರ್ನಾಟಕದಿಂದ ಕಾಸರಗೋಡಿಗೆ ಬರುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ಸಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 30 ಕಿಲೋ ಶ್ರೀಗಂಧದ ಕೊರಡು ಗಳನ್ನು ಮಂಜೇಶ್ವರ ಅಬಕಾರಿ ತಪಾಸಣಾ ಕೇಂದ್ರದಿಂದ ಎಕ್ಸೈಸ್ ಇನ್‌ಸ್ಪೆಕ್ಟರ್ ಎಸ್. ಇರ್ಷಾದ್ ನೇತೃತ್ವದ ಅಬಕಾರಿ ತಂಡ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಆದೂರು ಕುಂಟಾರಿನ ಸಂಶುದ್ದೀನ್ (38) ಎಂಬಾತನನ್ನು ವಶಕ್ಕೆ ತೆಗೆದುಕೊಂಡ ನಂತರ ಆತನನ್ನು ಅಬಕಾರಿ ತಂಡ ಮಾಲು ಸಹಿತ ಅರಣ್ಯ ಇಲಾಖೆಗೆ ಹಸ್ತಾಂತರಿಸಿದೆ. ಅಬಕಾರಿ ಪ್ರಿವೆಂ ಟೀವ್ ಆಫೀಸರ್ ಶ್ರೀಕಾಂತ್, ಸಿಇಒ ಅತುಲ್‌ರಾಜ್ ಎಂಬವರು ಈ ಕಾರ್ಯಾಚರಣ ನಡೆಸಿದ್ದಾದ ತಂಡದಲ್ಲಿ ಒಳಗೊಂಡಿದ್ದರು.

RELATED NEWS

You cannot copy contents of this page