ಬಾಕ್ರಬೈಲಿನಲ್ಲಿ ಯುವಕನಿಗೆ ಗುಂಡೇಟಿನಿಂದ ಗಂಭೀರ ಗಾಯ
ಉಪ್ಪಳ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಬಾಕ್ರಬೈಲಿನಲ್ಲಿ ಯುವಕನೋರ್ವ ಗುಂಡೇಟುತಗಲಿ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಬಾಕ್ರಬೈಲು ನಿವಾಸಿ ಸವಾದ್ ಎಂಬವರಿಗೆ ಗುಂಡು ತಗಲಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ನಿನ್ನೆ ರಾತ್ರಿ 10.30ರ ವೇಳೆ ಘಟನೆ ನಡೆದಿದೆ. ಗುಡ್ಡೆಯ ಮೇಲಿಂದ ಬೆಳಕು ಕಂಡು ಬಂದ ಹಿನ್ನೆಲೆಯಲ್ಲಿ ಸವಾದ್ ಅಲ್ಲಿಗೆ ತೆರಳಿದ್ದಾರೆಂದೂ ಈ ವೇಳೆ ಅವರಿಗೆ ಗುಂಡೇಟು ತಗಲಿದೆಯೆಂಬುದಾಗಿ ಪೊಲೀಸರಿಗೆ ಲಭಿಸಿದ ಪ್ರಾಥಮಿಕ ಮಾಹಿತಿಯಾಗಿದೆ. ಪೊಲೀಸರು ಸ್ಥಳದಲ್ಲಿ ನಡೆಸಿದ ತಪಾಸಣೆ ವೇಳೆ ಇಲಿಗಳನ್ನು ಕೊಲ್ಲಲು ಬಳಸುವ ಉಪಕರಣದಿಂದ ಬಂದೂಕಿನ ರೀತಿಯಲ್ಲಿ ನಿರ್ಮಿಸಿದ ಉಪಕರಣ ಪತ್ತೆಯಾಗಿದೆ.
ಈ ಕುರಿತಾಗಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.