ಬಾವಿಯ ಆವರಣಗೋಡೆ ಕುಸಿಯುವ ಭೀತಿ: ಕೊಡ್ಯಮ್ಮೆಯಲ್ಲಿ ಆತಂಕ

ಕುಂಬಳೆ: ಕೊಡ್ಯಮ್ಮೆ ಉಜಾರು ಅಂಗನವಾಡಿ ಸಮೀಪವಿರುವ ಬಾವಿ ಅಪಾಯಭೀತಿಯೊಡ್ಡುತ್ತಿದೆ. ಬಾವಿಯ ಆವರಣಗೋಡೆ ಕುಸಿಯುವ ಭೀತಿಯಲ್ಲಿ ರುವುದು ಆತಂಕಕ್ಕೆ ಕಾರಣವಾಗಿದೆ. ಅಂಗನವಾಡಿ ಸಮೀಪ ದಲ್ಲೇ ಗ್ರಂಥಾಲ ಯವೊಂದು ಕಾರ್ಯಾ ಚರಿಸುತ್ತಿದೆ. ಅಂಗನವಾಡಿ ಮಕ್ಕಳು ಹಾಗೂ ಗ್ರಂಥಾಲಯಕ್ಕೆ ತೆರಳುವವರು ಈ ಬಾವಿ ಸಮೀಪದಲ್ಲಾಗಿ ನಡೆದು ಹೋಗಬೇಕಾ ಗುತ್ತಿದೆ. ಆದರೆ ಭದ್ರತೆಯಿಲ್ಲದೆ ಈ ಬಾವಿಯಿಂದ ಅಪಾಯಭೀತಿ ಎದುರಾಗಿ ದೆಯೆಂದು ಸ್ಥಳೀಯರು ತಿಳಿಸುತ್ತಿದ್ದಾರೆ. ಹಲವು ವರ್ಷಗಳ ಹಿಂದೆ ನಿರ್ಮಿಸಿದ ಈ ಸರಕಾರಿ ಬಾವಿಯ ಸುತ್ತ ಮಳೆಗಾಲ ದಲ್ಲಿ ನೀರು ತುಂಬಿಕೊಂಡಿರುವುದೇ ಇದೀಗ ಆವರಣಗೋಡೆ ಕುಸಿಯುವ ಹಂತಕ್ಕೆ ತಲುಪಿದೆ. ಇದನ್ನು ಶೀಘ್ರ ದು ರಸ್ತಿ ನಡೆಸಬೇಕೆಂದು ಒತ್ತಾಯಿಸಿ ನಾಗರಿ ಕರು ಪಂಚಾಯತ್‌ಗೆ ಮನವಿ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page