ಬಿ.ವಿ. ವಿಜಯಭಾರತ್ ರೆಡ್ಡಿ ಕಾಸರಗೋಡು ಪೊಲೀಸ್ ವರಿಷ್ಠಾಧಿಕಾರಿ

ಕಾಸರಗೋಡು: ರಾಜ್ಯದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ವರ್ಗಾಯಿಸಲಾಗಿದೆ. ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಬಿ.ವಿ. ವಿಜಯಭಾರತ್ ರೆಡ್ಡಿಯವರನ್ನು ನೇಮಕ ಮಾಡಲಾಗಿದೆ. 2019ನೇ ಐಪಿಎಸ್ ಬ್ಯಾಚ್‌ನವರಾಗಿದ್ದಾರೆ. ತಿರುವನಂತಪುರ ಸಿಟಿ ಡೆಪ್ಯುಟಿ ಪೊಲೀಸ್ ಕಮಿಷನರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ತಿರುವನಂತಪುರದಲ್ಲಿ ಸ್ಪೆಷಲ್ ಆಪರೇಶನ್ಸ್ ವಿಭಾಗ ಸುಪರಿಂಟೆಂಡೆಂಟ್ ಆಗಿದ್ದ ಪರಶ್‌ಟಿ ಐಪಿಎಸ್‌ರವರನ್ನು ಆ ಹುದ್ದೆಗೆ ನೇಮಕಗೊಳಿಸಲಾಗಿದೆ. ದೀಪಕ್ ಧನ್‌ಕರ್ ಐಪಿಎಸ್‌ರನ್ನು ಸ್ಪೆಷಲ್ ಆಪರೇಶನ್ ಸೂಪರಿಂಟೆಂಡೆಂಟ್‌ರಾಗಿ ನೇಮಕಗೊಳಿಸಲಾಗಿದೆ. ಎರ್ನಾಕುಳಂ ರೂರಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ವೈಭವ್ ಸಕ್ಸೇನಾರನ್ನು ಎನ್.ಐ.ಎ.ಗೆ ಡೆಪ್ಯು ಟೇಶನ್‌ನಲ್ಲಿ ನೇಮಕಗೊಳಿಸಲಾಗಿದೆ. ಬದಲಿಗೆ ಎರ್ನಾಕುಳಂನಲ್ಲಿ ಹೇಮಲತ ಐಪಿಎಸ್‌ರಿಗೆ ಹೊಣೆ ನೀಡಲಾಗಿದೆ.

ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಡಿ. ಶಿಲ್ಪಾ ಸಿಬಿಐಗೆ ಡೆಪ್ಯುಟೇಶನ್‌ನಲ್ಲಿ ತೆರಳಿದ ಹಿನ್ನೆಲೆಯಲ್ಲಿ ವಿಜಯ ಭಾರತ್ ರೆಡ್ಡಿಯವರನ್ನು ಎಸ್‌ಪಿ ಆಗಿ ನೇಮಕಗೊಳಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page