ಬೃಹತ್ ಪ್ರಮಾಣದ ನಿಷೇಧಿತ ತಂಬಾಕು ಉತ್ಪನ್ನ ವಶ: ಕಾರು ಸಹಿತ ಇಬ್ಬರ ಸೆರೆ

ಕಾಸರಗೋಡು: ನಗರದ ಅಡ್ಕತ್ತಬೈಲು ರಾಷ್ಟ್ರೀಯ ಹೆದ್ದಾರಿ ಬಳಿ ಕಾಸರಗೋಡು ಪೊಲೀಸ್ ಠಾಣೆ ಎಸ್‌ಐ ಅಖಿಲ್ ಪಿ.ಪಿ. ಅವರ ನೇತೃತ್ವದಲ್ಲಿ ನಿನ್ನೆ ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಕಾರಿನಲ್ಲಿ ಅಕ್ರಮವಾಗಿ ಸಾಗಿಸಲಾದ ಕೇರಳದಲ್ಲಿ ನಿಷೇಧ ಹೇರಲಾಗಿರುವ ಬೃಹತ್ ಪ್ರಮಾಣದ ತಂಬಾಕು ಉತ್ಪನ್ನಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಆ ಕಾರಿನಲ್ಲಿದ್ದ ಪಳ್ಳಿಕ್ಕೆರೆ  ಕೊಹಿನೂರು ಶೋಮಿಲ್ ಬಳಿಯ ಈಗ ವಾಸಿಸುತ್ತಿರುವ ಮೂಲತಃ ಉತ್ತರ ಪ್ರದೇಶ ಮವ್ವ ಕಸ್ಬಾಕರ್  ನಿವಾಸಿ ಸುನಿಲ್ ಚೌಹಾಣ್ (೨೬) ಮತ್ತು  ಪಳ್ಳಿಕೆರೆ ಕರುವಕೋಡು ಝೋಯಾಲ್ ಮಂಜಿಲ್‌ನ ಮೊಹಮ್ಮದ್ ಹನೀಫ ಎ.ಎಂ (೫೬) ಎಂಬವರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾಲು ಸಾಗಿಸಲು ಉಪಯೋಗಿಸಲಾದ ಕಾರನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಾರಿನಲ್ಲಿ ಹಲವು ಗೋಣಿ ಚೀಲಗಳಲ್ಲಾಗಿ ಈ ನಿಷೇಧಿತ ತಂಬಾಕು ಉತ್ಪನ್ನಗಳನ್ನು ಬಚ್ಚಿಡಲಾಗಿತ್ತು. ಆ ಪೈಕಿ ನಾಲ್ಕು ಗೋಣಿಚೀಲಗಳಲ್ಲಾಗಿ ೩೨೦೦, ೧೬ ಗೋಣಿ ಚೀಲಗಳಲ್ಲಾಗಿ ೧೩,೬೦೦ ಪ್ಯಾಕೆಟ್, ಮೂರು ಗೋಣಿ ಚೀಲಗಳಲ್ಲಿ ೩೪೩೨ ಪ್ಯಾಕೆಟ್, ಒಂದು ಚೀಲದಲ್ಲಿ ೯೩೫, ಇನ್ನೊಂದರಲ್ಲಿ ೭೫೦ ಹಾಗೂ ಮತ್ತೊಂದರಲ್ಲಿ ೪೪೦೦ ಪ್ಯಾಕೆಟ್  ನಿಷೇಧಿತ ತಂಬಾಕು ಉತ್ಪನ್ನ ಗಳು ಒಳಗೊಂಡಿದೆಯೆಂದು ಪೊಲೀ ಸರು ತಿಳಿಸಿದ್ದಾರೆ. ಉತ್ತರಭಾರತದಿಂದ ಈ ಮಾಲುಗಳನ್ನು ಕೇರಳಕ್ಕೆ ತಂದು ಮಾರಾಟ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page