ಬೆಳ್ಳೂರಿನ ಜೂಜಾಟ ಕೇಂದ್ರಕ್ಕೆ ಪೊಲೀಸ್ ದಾಳಿ: ೬ ಮಂದಿ ಸೆರೆ; ೨೭೪೬೦ ರೂ. ವಶ

ಮುಳ್ಳೇರಿಯ: ಬೆಳ್ಳೂರು ಜಿಎಚ್‌ಎಸ್‌ಎನ್ ಶಾಲಾ ಮೈದಾನದ ಬಳಿ ನಡೆಯುತ್ತಿದ್ದ ಜೂಜಾಟ ಕೇಂದ್ರಕ್ಕೆ ಆದೂರು ಪೊಲೀಸ್ ಠಾಣೆಯ ಎಸ್‌ಐ ಕೆ. ಅನೂಪ್‌ರ ನೇತೃತ್ವದ ಪೊಲೀಸರು ದಾಳಿ ನಡೆಸಿ, ಜೂಜಾಟದಲ್ಲಿ ನಿರತರಾಗಿದ್ದ ಆರು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ ೨೭೪೬೦ ರೂ. ವಶಪಡಿಸಲಾಗಿದೆ. ನಾಟೆಕಲ್ಲು ಹೌಸಿನ ರವಿ (೪೦), ರವಿ (೩೮), ನಾಟೆಕಲ್ಲು ಚಾಲ ಮೂಲೆ ಹೌಸಿನ ವಿಜಯ್ ಕುಮಾರ್ (೩೪), ಎನ್. ರೂಪೇಶ್ (೨೭)ಕುಂಬ್ಡಾಜೆಯ ನವೀನ್ ಕುಮಾರ್ (೨೭) ಮತ್ತು ಬೆಳ್ಳೂರು ಪಳ್ಳಪ್ಪಾಡಿಯ ಸುರೇಶ್ (೪೦) ಎಂಬವರನ್ನು ಈ ಸಂಬಂಧ ಬಂಧಿಸಲಾಗಿದೆ. ಜೂಜಾಟ ಬಗ್ಗೆ ಲಭಿಸಿದ ಗುಪ್ತ ಮಾಹಿತಿ ಆಧಾರದಲ್ಲಿ ಇಂದು ಮುಂಜಾನೆ ಪೊಲೀಸರು ದಾಳಿ ನಡೆಸಿದ್ದಾರೆ.

RELATED NEWS

You cannot copy contents of this page