ಭಾರತ ತೊರೆಯದ ಪಾಕಿಸ್ತಾನಿ ಪ್ರಜೆಗಳಿಗೆ 3 ವರ್ಷ ಸಜೆ, ಜುಲ್ಮಾನೆ
ನವದೆಹಲಿ: ಪಾಕಿಸ್ತಾನದ ಪ್ರಜೆಗಳು ಭಾರತ ತೊರೆಯಲು ಕೇಂದ್ರ ಸರಕಾರ ನೀಡಿದ ಗಡುವು ಈಗಾಗಲೇ ಮುಗಿದಿದೆ. ಈ ಗಡುವು ಮುಗಿದರೂ ಭಾರತ ತೊರೆಯದೆ ಇನ್ನೂ ಇಲ್ಲಿ ಉಳಿದುಕೊಂಡಿ ರುವುವವರನ್ನು ಬಂಧಿಸಿ ಮೂರು ವರ್ಷಗಳ ವರೆಗೆ ಜೈಲು ಶಿಕ್ಷೆ ಮತ್ತು 3 ಲಕ್ಷ ರೂ. ಜುಲ್ಮಾನೆ ವಿಧಿಸಲಾಗು ವುದೆಂದು ಕೇಂದ್ರ ಸರಕಾರ ಖಡಕ್ ಮುನ್ನೆಚ್ಚರಿಕೆ ನೀಡಿದೆ.
ಜಮ್ಮು- ಕಾಶ್ಮೀರದ ಪಹಲ್ಗಾಮ್ನಲ್ಲಿ ಪಾಕ್ ಉಗ್ರರು ನಡೆಸಿದ ದಾಳಿಯ ಹಿನ್ನೆಲೆಯಲ್ಲಿ ಭಾರತದಲ್ಲಿರುವ ಎಲ್ಲಾ ಪಾಕಿಸ್ತಾನಿ ಪ್ರಜೆಗಳು ಎಪ್ರಿಲ್ 29ರೊಳಗಾಗಿ ಭಾರತ ಬಿಟ್ಟು ತೊಲಗುವಂತೆ ಕಠಿಣ ನಿರ್ದೇಶ ನೀಡಿತ್ತು. ಆ ಗಡು ಈ ಈಗ ಕೊನೆಗೊಂಡಿದೆ. ಅದಾದ ಬೆನ್ನಲ್ಲೇ ಭಾರತದಲ್ಲಿ ಇನ್ನೂ ಉಳಿದುಕೊಂಡಿರುವ ಪಾಕ್ ಪ್ರಜೆಗಳಿಗೆ ಕೇಂದ್ರ ಸರಕಾರ ಈ ಶಿಕ್ಷೆ ಕ್ರಮ ಘೋಷಿಸಿದೆ. ವಲಸೆ ಮತ್ತು ವಿದೇಶಿಯರ ಕಾಯ್ದೆ 2025ರ ಅಡಿ ಈ ಶಿಕ್ಷಾ ಕ್ರಮ ಕೈಗೊಳ್ಳಲು ಕೇಂದ್ರ ಸರಕಾರ ಮುಂದಾಗಿದೆ.