ಮಂಜೇಶ್ವರ ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ
ಮಂಜೇಶ್ವರ: ಶ್ರೀ ಯಾದವೇಂದ್ರ ಆಯುರ್ವೇದ ವೈದ್ಯಶಾಲಾ, ಶ್ರೀ ಭುವನೇಂದ್ರ ಪಂಚಕರ್ಮ ಸೆಂಟರ್ ಕೋಟೇಶ್ವರ, ಶ್ರೀಮದ್ ಅನಂತೇಶ್ವರ ದೇವಸ್ಥಾನ ಹಾಗೂ ಜಿ.ಎಸ್.ಬಿ ಸಂಘ ಮಂಜೇಶ್ವರ ಇವರ ಸಹಕಾರದೊಂದಿಗೆ ಉಚಿತ ಆಯುರ್ವೇದ ಆರೋಗ್ಯ ತಪಾಸಣೆ ಹಾಗೂ ಫಿಜಿಯೋಥೆರಪಿ ಶಿಬಿರ ನಿನ್ನೆ ಮಂಜೇಶ್ವರ ಶ್ರೀ ವಿಭುದೇಂದ್ರ ಕಲಾ ಮಂಟಪದಲ್ಲಿ ನಡೆಯಿತು. ಕ್ಷೇತ್ರದ ಮಾಜಿ ಅಧ್ಯಕ್ಷ ಕೆ.ದಿನೇಶ್ ಜಿ.ಕಾಮತ್ ಕೋಟೇಶ್ವರ ದೀಪಪ್ರಜ್ವಲನೆಗೊಳಿಸಿ ಶಿಬಿರಕ್ಕೆ ಚಾಲನೆ ನೀಡಿದರು. ಕ್ಷೇತ್ರದ ಅಧ್ಯಕ್ಷ ಟಿ.ಗಣಪತಿ ಪೈ ಅಧ್ಯಕ್ಷತೆ ವಹಿಸಿದರು. ಡಾ| ಎಂ.ಎಸ್ ಕಾಮತ್, ಡಾ| ಸದಾನಂದ ಭಟ್, ಡಾ| ಗಾಯತ್ರಿ ಪಡಿಯಾರ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಮಂಗಳೂರು ಮೆ. ಪೈ.ಸೇಲ್ಸ್ ಕಾರ್ಪೋರೇಶನ್ ಆಡಳಿತ ನಿರ್ದೇಶಕ ಟಿ.ರತ್ನಾಕರ ಪೈ, ಕ್ಷೇತ್ರದ ಉಪಾಧ್ಯಾಕ್ಷ ಆರ್.ನಿತಿನ್ ಚಂದ್ರ ಪೈ, ಮಂಜೇಶ್ವರ, ಕೋಶಾಧಿಕಾರಿ ಪ್ರಶಾಂತ್ ಪೈ ಮಂಗಳೂರು, ಮಂಜೇಶ್ವರ ಎಸ್.ಎ.ಟಿ ವಿದ್ಯಾಸಂಸ್ಥೆ ಪ್ರಬಂಧಕ ಎಂ.ಪ್ರಶಾAತ್ ಹೆಗ್ಡೆ ಮಂಜೇಶ್ವರ, ಕ್ಷೇತ್ರದ ಮೊಕ್ತೇಸರ ರಾಜೇಶ್ ಪೈ ಕಾಸರಗೋಡು ಉಪಸ್ಥಿತರಿದ್ದರು. ಮಂಜೇಶ್ವರ ಗೌಡಸಾರಸ್ವತ ಬ್ರಾಹ್ಮಣ ಸಂಘದ ಅಧ್ಯಕ್ಷ ಎ.ಶ್ಯಾಮ್ ಪ್ರಸಾದ್ ಪ್ರಭು ಸ್ವಾಗತಿ, ಪ್ರಶಾಂತ್ ಪೈ ಮಂಗಳೂರು ವಂದಿಸಿದರು. ಪಲ್ಲವಿ ಪ್ರಭು ಪ್ರಾರ್ಥನೆ ಹಾಡಿದರು. ಲಕ್ಷಿ÷್ಮÃದಾಸ್ ಪ್ರಭು ನಿರೂಪಿಸಿದರು.