ಮಕ್ಕಳ ಯಕ್ಷಗಾನ ತಾಳಮದ್ದಳೆ

ಮೀಯಪದವು. ಕಯ್ಯಾರು ಜೋಡುಕಲ್ಲು ಸೊಂದಿ ಶ್ರೀ ದುರ್ಗಾಲಯದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಮೀಯಪದವಿನ ವಿದ್ಯಾವರ್ಧಕ ಮಕ್ಕಳ ಯಕ್ಷಗಾನ ಬಳಗದಿಂದ ‘ವೈದೇಹಿ ದರ್ಶನ ‘ ಎಂಬ ಕಥಾಭಾಗದ ತಾಳಮದ್ದಳೆ ಜರಗಿತು.ಪಾತ್ರವರ್ಗದಲ್ಲಿ ಶಾರ್ವರಿ ಎನ್. ನಾವಡ, ಅಭಿರಾಮ ಭಟ್, ವೀಕ್ಷ, ಮನೀಶ ಮತ್ತು ಅಭಿಜ್ಞಾಗಂಗ ಭಾಗವಹಿಸಿದರು. ಭಾಗವತರಾಗಿ ರವಿಶಂಕರ್ ಮಧೂರು, ವಿಘ್ನೇಶ್ ಮೀಯಪದವು, ಚೆಂಡೆಯಲ್ಲಿ ಗೋಪಾಲಕೃಷ್ಣ ನಾವಡ ಮಧೂರು, ಮೃದಂಗದಲ್ಲಿ ಮುರಳೀ ಮಾಧವ ಮಧೂರು ಸಹಕರಿಸಿದರು. ಅಧ್ಯಾಪಕರಾದ ನಾರಾಯಣ ನಾವಡ ಮಕ್ಕಳಿಗೆ ತರಬೇತಿ ನೀಡಿದ್ದರು.

Leave a Reply

Your email address will not be published. Required fields are marked *

You cannot copy content of this page