ಮಣ್ಣು ಅಗೆಯುವ ಯಂತ್ರ ಮಗುಚಿ ಬಿದ್ದು ಮಹಿಳಾ ಕಾಂಗ್ರೆಸ್ ನೇತಾರೆ ಪುತ್ರ ದಾರುಣ ಮೃತ್ಯು
ಕಾಸರಗೋಡು: ಮಣ್ಣು ಅಗೆಯುವ ಯಂತ್ರ ಮಗುಚಿ ಬಿದ್ದು ಸಂಭವಿಸಿದ ಅಪಘಾತದಲ್ಲಿ ಮಹಿಳಾ ಕಾಂಗ್ರೆಸ್ ನೇತಾರೆಯ ಪುತ್ರ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಮಹಿಳಾ ಕಾಂಗ್ರೆಸ್ ನೇತಾರೆ ಮಿನಿಚಂದ್ರನ್ ಎಂಬವರ ಪುತ್ರ ಪ್ರೀತಂಲಾಲ್ಚಂದ್ (22) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇಂದು ಬೆಳಿಗ್ಗೆ 10 ಗಂಟೆ ವೇಳೆ ಈ ದಾರುಣ ಅಪಘಾತ ಸಂಭವಿಸಿದೆ. ಪಡ್ಪುನಲ್ಲಿರುವ ಮನೆ ಪರಿಸರದಲ್ಲಿ ಮಣ್ಣು ಅಗೆಯುವ ಯಂತ್ರ ಕೆಲಸದಲ್ಲಿ ತೊಡಗಿರುವಾಗ ಮಗುಚಿ ಬಿದ್ದಿದೆ. ಅಪಾಯದಿಂದ ಪಾರಾಗಲು ಪ್ರಯತ್ನಿಸಿದರೂ ಸಾಧ್ಯವಾಗದೆ ಪ್ರೀತಂಲಾಲ್ ಚಂದ್ ಯಂತ್ರದಡಿ ಸಿಲುಕಿಕೊಂಡಿದ್ದರು. ಕುತ್ತಿಕೋಲ್ ನಿಂದ ಅಗ್ನಿಶಾಮಕ ದಳ ರಕ್ಷಣಾ ಕಾರ್ಯಕ್ಕಾಗಿ ತಲುಪಿತ್ತು. ಆದರೆ ಅದರ ಮೊದಲೇ ನಾಗರಿಕರು ಪ್ರೀತಂಲಾಲ್ಚಂದ್ರನ್ನು ಯಂತ್ರ ದಡಿಯಿಂದ ಹೊರತೆಗೆದು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾ ಗಲಿಲ್ಲ. ದಿ| ಬಂಡಂಕೈ ಚಂದ್ರನ್ರ ಪುತ್ರನಾದ ಮೃತರು ತಾಯಿ, ಸಹೋದರ ಲಾಲು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಘಟನೆ ಬಗ್ಗೆ ಬೇಡಗಂ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.