ಮದುವೆ ವೇಷದಲ್ಲಿ ಮತ ಚಲಾಯಿಸಿದ ಬಳಿಕ ಕಲ್ಯಾಣ ಮಂಟಪಕ್ಕೆ ತೆರಳಿದ ಸುಜಿತಾ

ಬದಿಯಡ್ಕ:  ಇಂದು ಮದುವೆ ಯಾಗಿ ದಾಂಪತ್ಯಕ್ಕೇರಲಿರುವ ಸುಜಿತಾ ಹಸೆಮಣೆಗೇರುವ ಮೊದಲು ಮದುವೆವೇಷದಲ್ಲಿ ಮೊದಲು ತಲುಪಿದ್ದು ಮತಗಟ್ಟೆಗೆ. ಸರದಿಯಲ್ಲಿ ನಿಂತು ಮತ ಚಲಾಯಿಸಿದ ಬಳಿಕ ಅವರು ಕಲ್ಯಾಣ ಮಂಟಪಕ್ಕೆ ತೆರಳಿದರು.

ಅಗಲ್ಪಾಡಿ ನಿವಾಸಿಗಳಾದ ಮೋಹನ ಪುರುಷ-ಜಯಂತಿ ದಂಪತಿಯ ಪುತ್ರಿ ಸುಜಿತಾ ಯು.ಎಂ. ಅವರ ವಿವಾಹವನ್ನು ಕರ್ನಾಟಕದ ಪುತ್ತೂರು ನರಿಮೊಗರು ನಿವಾಸಿ ಸಂತೋಷ್‌ರೊಂದಿಗೆ ಎಪ್ರಿಲ್  26ರಂದು ನಡೆಸಲು ಈ ಹಿಂದೆಯೇ ನಿರ್ಧರಿಸಲಾಗಿತ್ತು.  ಅನಂತರ ಲೋಕಸಭಾ ಚುನಾವಣೆ ಇದೇ ದಿನ ನಡೆಸುವುದಾಗಿ ಘೋಷಿಸಲಾಗಿದೆ. ಮೊದಲೇ ನಿರ್ಧರಿಸಿದ ಪ್ರಕಾರ ಮದುವೆಗಿರುವ ಸಿದ್ಧತೆಗಳನ್ನು ವಧು-ವರನ ಮನೆಯವರು ನಡೆಸಿದ್ದಾರೆ. ಇಂದು ಪುತ್ತೂರಿನಲ್ಲಿ ಮದುವೆ ನಡೆಯಲಿದೆ. ಪ್ರತಿಯೊಂದು ಮತವೂ ಅಮೂಲ್ಯವಾಗಿದೆಯೆಂದು ತಿಳಿದ ಸುಜಿತಾ ಇಂದು ಬೆಳಿಗ್ಗೆ ಅಗಲ್ಪಾಡಿಯ ಮತಗಟ್ಟೆ ನಂಬ್ರ ೮೨ರಲ್ಲಿ ಮತ ಚಲಾಯಿಸಿದ ಬಳಿಕ ಪುತ್ತೂರಿನ ಕಲ್ಯಾಣ ಮಂಟಪಕ್ಕೆ ತೆರಳಿದರು.

Leave a Reply

Your email address will not be published. Required fields are marked *

You cannot copy content of this page