ಮನೆಯಿಂದ ಹೊರಗೆ ಹೋದ ಯುವಕ ಬಾವಿಗೆ ಬಿದ್ದು ಮೃತ್ಯು

ಮುಳ್ಳೇರಿಯ: ಮನೆಯಿಂದ ಹೊರಗೆ ತೆರಳಿದ ಯುವಕನೋರ್ವ ಪಾಳುಬಾವಿಗೆ ಬಿದ್ದು ಮೃತಪಟ್ಟ ದಾರುಣ ಘಟನೆ ನಡೆದಿದೆ.

ಬೆಳ್ಳೂರು ಪಂಚಾಯತ್ ವ್ಯಾಪ್ತಿಯ ಕಾಯರ್‌ಪದವು ಪಾಲೆಕೊಚ್ಚಿ ನಿವಾಸಿ ಐತ್ತಪ್ಪ ನಾಯ್ಕರ ಪುತ್ರ ಉಮೇಶ್ ಕುಮಾರ್ (೨೮) ಮೃತಪಟ್ಟ ದುರ್ದೈವಿ.  ಕೂಲಿ ಕಾರ್ಮಿಕನಾದ ಉಮೇಶ್ ಕುಮಾರ್ ನಿನ್ನೆ ಹಗಲು ಮನೆಯಲ್ಲಿದ್ದ ಇವರು ಸಂಜೆ ೫.೩೦ರ ವೇಳೆ ಮನೆಯಿಂದ ಹೊರಗೆ ತೆರಳಿದ್ದರೆನ್ನಲಾಗಿದೆ. ಅಲ್ಪ ಹೊತ್ತಿನಲ್ಲೇ ಅವರ ಹಿತ್ತಿಲಿನಲ್ಲಿ  ರುವ ಪಾಳು ಬಾವಿಗೆ ಬಿದ್ದ ಶಬ್ದ ಕೇಳಿಬಂದಿದೆ. ಈ ಬಗ್ಗೆ ತಾಯಿ ಸ್ಥಳೀಯರಲ್ಲಿ ತಿಳಿಸಿದ್ದಾರೆ. ಕೂಡಲೇ ಅಲ್ಲಿಗೆ ತಲುಪಿದ ಸ್ಥಳೀಯರು ಶೋಧ ನಡೆಸಿದ್ದು, ಈ ವೇಳೆ ಬಾವಿಗೆ ಬಿದ್ದ ಕುರುಹು ಪತ್ತೆಯಾಗಿದೆ. ಅಲ್ಲದೆ ಉಮೇಶ್ ಕೂಡಾ ನಾಪತ್ತೆಯಾಗಿರುವುದರಿಂದ ಸಂಶಯ ಬಲಗೊಂಡು ಕಾಸರಗೋಡು ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಲಾಯಿತು.  ಸ್ಟೇಶನ್ ಆಫೀಸರ್ ಸಂತೋಷ್ ಕುಮಾರ್ ನೇತೃತ್ವದಲ್ಲಿ ತಲುಪಿದ ಅಗ್ನಿಶಾಮಕದಳ ಬಾವಿಯಲ್ಲಿ ಶೋಧ  ನಡೆಸಿದಾಗ ಉಮೇಶ್‌ರ ಮೃತದೇಹ ಪತ್ತೆಯಾಗಿದೆ. ಬಳಿಕ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ.

ಮೃತರು ತಂದೆ, ತಾಯಿ ಸವಿತ,ಸಹೋದರ ಶಿವಪ್ರಸಾದ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page