ಮಾದಕದ್ರವ್ಯ ವ್ಯಸನ ಸಂದೇಶ ಯಾತ್ರೆ  5ರಿಂದ: ಲಾಂಛನ ಬಿಡುಗಡೆ

ಕಾಸರಗೋಡು: ಮಾದಕದ್ರವ್ಯ ವ್ಯಸನದ ವಿರುದ್ಧ ರಾಜ್ಯ ಕ್ರೀಡಾ ಇಲಾಖೆಯ ನೇತೃತ್ವದಲ್ಲಿ ಮೇ ೫ರಂದು ಕಾಸರಗೋಡಿನಿಂದ ಆರಂಭಗೊಳ್ಳುವ ಸಂದೇಶ ಯಾತ್ರೆಯ ಲಾಂಛನವನ್ನು ಕ್ರೀಡಾ ಸಚಿವ ವಿ. ಅಬ್ದುಲ್ ರಹ್ಮಾನ್ ತಿರುವನಂತಪುರದಲ್ಲಿ ನಡೆದ ಸಮಾರಂಭದಲ್ಲಿ ಪ್ರಕಾಶನಗೈದರು.

ಮೇ ೫ರಂದು ಕಾಸರಗೋ ಡಿನಿಂದ ಆರಂಭಗೊಳ್ಳುವ ಈ ಸಂದೇಶ ಯಾತ್ರೆ ಕ್ರೀಡಾ ಸಚಿವ ಎ. ಅಬ್ದುಲ್ ರಹ್ಮಾನ್‌ರ ನೇತೃತ್ವದಲ್ಲಿ ನಡೆಯಲಿದೆ. ಈ ಸಂದೇಶಯಾತ್ರೆ ವಿವಿಧ ದಿನಾಂಕದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪರ್ಯಟನೆ ನಡೆಸಿದ ಬಳಿಕ ಮೇ ೨೨ರಂದು ಎರ್ನಾಕು ಳಂನಲ್ಲಿ ಸಮಾಪ್ತಿಹೊಂದಲಿದೆ. ಸಮಾರೋಪ ದಿನದಂದು ಎರ್ನಾಕುಳಂನಲ್ಲಿ ಅಂತಾರಾಷ್ಟ್ರ ಮಟ್ಟದ ಮೆರಥಾನ್ ನಡೆಸಲಾಗು ವುದು. ಇದರ ಹೊರತಾಗಿ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. ಈ ಸಂದೇಶ ಯಾತ್ರೆಯ ಸಲುವಾಗಿ ಎಲ್ಲಾ ಜಿಲ್ಲೆಗಳಲ್ಲೂ ಮೆರಥಾನ್ ಹಾಗೂ ಸೈಕಲ್ ರ‍್ಯಾಲಿಗಳನ್ನು ನಡೆಸಲಾಗುವುದು.

ಮಾದಕದ್ರವ್ಯ ವಿರುದ್ಧ ಕ್ರೀಡಾ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಾ ಗುವುದು. ಆ ಮೂಲಕ ಕ್ರೀಡಾಳುಗಳು ಮಾತ್ರವಲ್ಲ ಮಕ್ಕಳಲ್ಲೂ ಮಾದಕದ್ರವ್ಯ ವ್ಯಸನದ ವಿರುದ್ಧ ಜಾಗ್ರತೆ ಮೂಡಿಸಲಾಗುವುದೆಂದು ಸಚಿವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page