ಮಾದಕವಸ್ತು ಸಾಗಾಟಗಾರರಿಗೆ ಕಡಿವಾಣ: 25 ಮಂದಿ ಮುಂಜಾಗ್ರತಾ ಬಂಧನಕ್ಕೆ ಅಬಕಾರಿ ಇಲಾಖೆ ಶಿಫಾರಸು
ಕಾಸರಗೋಡು: ರಾಜ್ಯದಲ್ಲಿ ಮಾದಕವಸ್ತು ಸಾಗಾಟಕ್ಕೆ ಪೂರ್ಣವಾಗಿ ಕಡಿವಾಣ ಹಾಕುವ ಉದ್ದೇಶದಿಂದ ಅಬಕಾರಿ ಇಲಾಖೆ ಇನ್ನಷ್ಟು ಕಠಿಣ ಕ್ರಮಗಳನ್ನು ಅನುಸರಿಸಲಿದೆ. ಇದರ ಭಾಗವಾಗಿ ನಿರಂತರ ಮಾದಕವಸ್ತು ಸಾಗಾಟದಲ್ಲಿ ತೊಡಗಿಕೊಂಡ 25 ಮಂದಿಯನ್ನು ಮುಂಜಾಗ್ರತಾ ಕ್ರಮದಂಗವಾಗಿ ಬಂಧನದಲ್ಲಿರಿಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ಅಬಕಾರಿ ಇಲಾಖೆ ಗೃಹಖಾತೆ ಕಾರ್ಯದರ್ಶಿಗೆ ಅರ್ಜಿ ಸಲ್ಲಿಸಿದೆ. ಅರ್ಜಿ ಮೇಲೆ ಗೃಹ ಕಾರ್ಯದರ್ಶಿ ಕೈಗೊಳ್ಳುವ ನಿರ್ಧಾರವನ್ನು ಹೈಕೋರ್ಟ್ನ ನ್ಯಾಯಾಧೀಶರು ಒಳಗೊಂಡ ಸಮಿತಿ ಪರಿಶೀಲಿಸಿದ ಬಳಿಕ ಅಂತಿಮ ಅನುಮತಿ ನೀಡಲಿದ್ದಾರೆ.
ಸೆರೆಗೀಡಾದಲ್ಲಿ ಯಾವುದೇ ವಿಚಾರಣೆಯಿಲ್ಲದೆ ಎರಡು ವರ್ಷವರೆಗೆ ಜೈಲಿನಲ್ಲಿರಬೇಕಾಗಿ ಬರಲಿದೆ. ಪಿಟ್ಎನ್ಡಿಪಿಎಸ್ (ಪ್ರಿವೆನ್ಶನ್ ಆಫ್ ಇಲ್ಲಿಸಿಟಿ ಟ್ರಾಫಿಕ್-ನರ್ಕೋಟಿಕ್ ಡ್ರಗ್ಸ್ ಆಂಡ್ ,ಸೈಕೋ ಟ್ರೋಫಿಕ್ ಸಬ್ಸ್ಟನ್ಸ್) ಪ್ರಕಾರ ಬಂಧನ ನಡೆಯಲಿದೆ. ಈ ಆಕ್ಟ್ ಪ್ರಕಾರ ಇದುವರೆಗೆ ಒಬ್ಬನನ್ನು ಮಾತ್ರವೇ ಬಂಧಿಸಲಾಗಿದೆ.
ರಾಜ್ಯಕ್ಕೆ ಭಾರೀ ಪ್ರಮಾಣದಲ್ಲಿ ಮಾದಕವಸ್ತು ಸಾಗಾಟ ನಡೆಸುತ್ತಿರುವುದಾಗಿ ಅಂದಾಜಿಸಲಾದ 65 ಮಂದಿಯ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಅವರ ಮೇಲೆ ತೀವ್ರ ನಿಗಾ ಇರಿಸಲಾಗುವುದು. ಮಾದಕವಸ್ತು ಸಾಗಾಟ ದಂಧೆಯಲ್ಲಿ ರಾಜ್ಯದ ಹೊರಗಿನವರು ಒಳಗೊಂಡಿದ್ದು ಅವರ ಮೇಲೂ ಪೊಲೀಸ್, ಅಬಕಾರಿ ಸೇನೆ ನಿಗಾ ಇರಿಸುತ್ತಿದೆ.
ಮಾದಕವಸ್ತು ಪ್ರಕರಣಕ್ಕೆ ಸಂಬAಧಿಸಿ ಸೆರೆಗೀಡಾಗಿ ಜಾಮೀನಿನಲ್ಲಿ ಬಿಡುಗಡೆಗೊಂಡು ಬಳಿಕ ತಲೆಮರೆಸಿಕೊಂಡ 237 ಮಂದಿಯನ್ನು ಇತ್ತೀಚೆಗಿನಿಂದ ಸೆರೆಹಿಡಿಯಲಾಗಿದೆ. ಈ ಕಾರ್ಯಾಚರಣೆ ತೀವ್ರಗೊಳಿಸಲು ಆಪರೇಶನ್ ಕ್ಲೀನ್ ಸ್ಟೇಟ್ನ ಎರಡನೇ ಹಂತವನ್ನು ನಿನ್ನೆಯಿಂದ ಆರಂಭಿಸಲಾಗಿದೆ. ಕಳೆದ ಮೂರು ತಿಂಗಳಲ್ಲಿ 3096 ಎನ್ಡಿಪಿಎಸ್ ಪ್ರಕರಣಗಳಲ್ಲಾಗಿ 3101 ಮಂದಿಯನ್ನು ಬಂಧಿಸಲಾಗಿದೆ. ಅಲ್ಲದೆ 1082 ಕಿಲೋ ಗಾಂಜಾ, 914 ಗ್ರಾಂ ಎಂಡಿಎAಎ, 177 ಗ್ರಾಂ ಹೆರಾಯಿನ್, 43.36 ಗ್ರಾಂ ಬ್ರೌನ್ ಶುಗರ್ ವಶಪಡಿಸಲಾಗಿದೆ.