ಮಾಲ್ಟದಲ್ಲಿ ಕಟ್ಟಡದಿಂದ ಬಿದ್ದು ಯುವಕ ಸಾವು
ಕಾಸರಗೋಡು: ಕುತ್ತಿಕ್ಕೋಲ್ ನಿವಾಸಿಯೊಬ್ಬರು ಯುರೋಪ್ಯನ್ ದೇಶವಾದ ಮಾಲ್ಟದಲ್ಲಿ ಕಟ್ಟಡದಿಂದ ಬಿದ್ದು ಮೃತಪಟ್ಟ ದಾರುಣ ಘಟನೆ ನಡೆದಿದೆ.
ಕುತ್ತಿಕ್ಕೋಲ್ ಶಂಕರಂಪಾಡಿಯ ಅಜೇಶ್ ಕುಮಾರ್ ಮಂಞನಡ್ಕ (40) ಮೃತಪಟ್ಟ ವ್ಯಕ್ತಿ. ಇವರು ನಾಲ್ಕು ವರ್ಷಗಳಿಂದ ಮಾಲ್ಟದಲ್ಲಿ ಕುಟುಂಬ ಸಮೇತ ವಾಸಿಸಿ ಉದ್ಯೋಗ ನಿರ್ವಹಿಸುತ್ತಿದ್ದರು. ಮೃತದೇಹವನ್ನು ಊರಿಗೆ ತಲುಪಿಸಲಿರುವ ಕ್ರಮಗಳು ಆರಂಭಗೊಂಡಿದೆ. ಕುತ್ತಿಕ್ಕೋಲ್ ಶಂಕರಂಪಾಡಿಯ ರಾಮಚಂದ್ರನ್ ನಾಯರ್ (ಆರ್ಎಸ್ಪಿ ಉದುಮ ಮಂಡಲ ಕಾರ್ಯದರ್ಶಿ)-ದಾಕ್ಷಾಯಿಣಿ ದಂಪತಿಯ ಪುತ್ರನಾದ ಮೃತರು ಪತ್ನಿ ಪ್ರಿಯಾ, ಪುತ್ರಿ ದೇವಿಕ, ಸಹೋದರರಾದ ವಿಜೇಶ್ (ದುಬಾ), ಜಯೇಶ್(ಮಾಲ್ಟ) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.