ಮೊಗ್ರಾಲ್ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಮತ್ತೆ ಅಪಘಾತ: ಸ್ಕೂಟರ್ ಅಪಘಾತದಲ್ಲಿ ಕ್ಷೇತ್ರ ಪದಾಧಿಕಾರಿ ಮೃತ್ಯು: ನಾಡಿನಲ್ಲಿ ಶೋಕಸಾಗರ

ಕಾಸರಗೋಡು: ಮೊಗ್ರಾಲ್ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರೋಡ್‌ನಲ್ಲಿ ನಿನ್ನೆ   ಸಂಭವಿಸಿದ ವಾಹನ ಅಪಘಾತದಲ್ಲಿ ಕ್ಷೇತ್ರದ ಪದಾಧಿಕಾರಿ ಮೃತಪಟ್ಟ ದಾರುಣ ಘಟನೆ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ.

ಮೊಗ್ರಾಲ್ ಪುತ್ತೂರು ಕಲ್ಲಂಗೈ ಬಳ್ಳೂರು ಐಶ್ವರ್ಯ ನಿಲಯದ ದಿನೇಶ್‌ಚಂದ್ರ (55) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇವರು ಎರಿಯಾಕೋಟ ಶ್ರೀ ಭಗವತೀ ಕ್ಷೇತ್ರದ ಆಡಳಿತ ಸಮಿತಿ ಕೋಶಾಧಿಕಾರಿಯಾಗಿದ್ದರು.

ನಿನ್ನೆ ಬೆಳಿಗ್ಗೆ 20 ಗಂಟೆ ವೇಳೆ ದಿನೇಶ್‌ಚಂದ್ರ ಸಂಚರಿಸುತ್ತಿದ್ದ ಸ್ಕೂಟರ್ ಮೊಗ್ರಾಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದೆ. ಇವರು ಕಾಸರಗೋಡು ಭಾಗದಿಂದ ಕುಂಬಳೆ ಭಾಗಕ್ಕೆ ತೆರಳುತ್ತಿದ್ದರು. ಮೊಗ್ರಾಲ್  ತಲುಪಿದಾಗ ಸ್ಕೂಟರ್  ಸರ್ವೀಸ್ ರಸ್ತೆಯ ಚರಂಡಿಯ ಸ್ಲ್ಯಾಬ್‌ನ ಬದಿಗೆ ಬಡಿದು ಮಗುಚಿ ಬಿದ್ದಿದೆ. ಈ ವೇಳೆ ರಸ್ತೆಗೆ ಬಿದ್ದ ದಿನೇಶ್‌ಚಂದ್ರರ ದೇಹದ ಮೇಲೆ ಹಿಂಭಾಗದಿಂದ ಬಂದ ಲಾರಿ ಚಲಿಸಿ ಗಂಭೀರ ಗಾಯಗೊಂಡಿದ್ದು, ತಕ್ಷಣ ಮೃತಪಟ್ಟಿದ್ದಾರೆ. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇ ಹವನ್ನು ಸ್ವ-ಗೃಹಕ್ಕೆ ತಲುಪಿಸಿ ಅಂತ್ಯಸಂಸ್ಕಾರ ನಡೆಸಲಾಯಿತು.

 ದಿ| ಜಗನ್ನಾಥ ಎಂಬವರ ಪುತ್ರನಾದ ಮೃತರು ತಾಯಿ ರೇವತಿ, ಪತ್ನಿ ಮಮತ, ಮಕ್ಕಳಾದ ತನುಶ, ಸಂಜಿತ್, ಸಹೋದರರಾದ ರವೀಂದ್ರನಾಥ, ನರೇಂದ್ರನ್, ಸುರೇಶ್, ಅನಿಲ್ ಹಾಗೂ ಅಪಾರ ಬಂದು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page