ಯುವಕನ ಮೃತದೇಹದ ಅಂತ್ಯ ಸಂಸ್ಕಾರ

ಉಪ್ಪಳ: ಕುಬಣೂರು ಶಾಂತಿಮೂಲೆ ನಿವಾಸಿ ದಿ| ಬಾಬು ಎಂಬವರ ಪುತ್ರ ನಾರಾಯಣ (೨೬)ರ ಸಾವಿನ ಬಗ್ಗೆ ಯಾವುದೇ ನಿಗೂಢತೆಗಳು ಪತ್ತೆಯಾಗಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.  ಇತ್ತೀಚೆಗೆ ನಾಟಕ ನೋಡಲೆಂದು ತಿಳಿಸಿ ತೆರಳಿದ್ದ ನಾರಾಯಣ ಬಳಿಕ ಬೇಕೂರು ಶಾಲಾ ರಸ್ತೆ ಹಿತ್ತಿಲಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ  ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ನಿನ್ನೆ ಬಂದ್ಯೋಡು ಸ್ಮಶಾನದಲ್ಲಿಲ ಅಂತ್ಯ ಸಂಸ್ಕಾರ ನಡೆಸಲಾಯಿತು.

You cannot copy contents of this page