ಎಡನೀರು: ಮುಳಿಯಾರು ಪಂಚಾಯತ್ ವ್ಯಾಪ್ತಿಯ ಎಡನೀರು ಮೋಪಾಲ ಶ್ರೀ ಮಹಾವಿಷ್ಣು ದೇವಸ್ಥಾನದ ಪುನರ್ ನಿರ್ಮಾಣ ಬಹುತೇಕ ಪೂರ್ಣಗೊಂಡಿದ್ದು, ಬ್ರಹ್ಮಕಲಶ ಸಮಿತಿ ರಚನೆ ಎಡನೀರು ಮಠದಲ್ಲಿ ನಡೆಯಿತು. ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಆಶೀರ್ವಚನ ನೀಡಿದರು. ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ನವೀನ್ ಕುಮಾರ್ ಭಟ್ ಅಧ್ಯಕ್ಷತೆ ವಹಿಸಿದರು. ಬ್ರಹ್ಮಕಲಶೋತ್ಸವ ಸಮಿತಿಗೆ ಮಧು ಸೂದನ ಆಯರ್ರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ವಾಮನ ಆಚಾರ್ಯ ಬೋವಿಕ್ಕಾನ ಪ್ರಧಾನ ಕಾರ್ಯದರ್ಶಿಯಾಗಿ, ಈಶ್ವರ ಭಟ್ ವಡಕ್ಕೇಮೂಲೆ ಕೋಶಾಧಿಕಾರಿಯಾಗಿ ಆಯ್ಕೆಯಾದರು. ಅಲ್ಲದೆ ೧೦೧ ಸದಸ್ಯರ ಸಮಿತಿ ರಚಿಸಲಾಯಿತು. ಶಶಿಧರ ಭಟ್ ಮಲ್ಲ, ಕೆ.ಎಂ. ಹೇರಳ ಮಾಸ್ತರ್, ಕೃಷ್ಣನ್ ಮಾತನಾಡಿದರು. ಕೆ.ಎಂ. ಶರ್ಮ, ಪ್ರಶಾಂತ ಕಲ್ಲುಗದ್ದೆ, ವಿನಯಪಾಲ್ ಭಾಗವಹಿಸಿದರು.






