ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಹಾಗೂ ಕ್ರಿಮಿನಲ್‌ಗಳಾಗಿರುವ ವಲಸೆ ಕಾರ್ಮಿಕರ ಪತ್ತೆ ಕಾರ್ಯಾಚರಣೆ ಮುಂದುವರಿಕೆ

ಕಾಸರಗೋಡು: ವಲಸೆ ಕಾರ್ಮಿಕರೆಂಬ ಸೋಗಿನಲ್ಲಿ  ಬಾಂಗ್ಲಾ ದೇಶ, ಪಾಕಿಸ್ತಾನ ಇನ್ನಿತರ ನೆರೆ ದೇಶಗಳಿಂದ ಅದೆಷ್ಟೋ ಮಂದಿ ನಕಲಿ ದಾಖಲು ಪತ್ರಗಳೊಂದಿಗೆ ಬಂದು ಕೇರಳದಲ್ಲಿ ಅಕ್ರಮವಾಗಿ ನೆಲೆಸಿದ್ದಾರೆಂಬ ಮಾಹಿತಿ ಲಭಿಸಿರುವ  ಹಿನ್ನೆಲೆಯಲ್ಲಿ ಅಂತಹವರನ್ನು ಪತ್ತೆಹಚ್ಚುವ ಕಾರ್ಯಾಚರಣೆಯನ್ನು ಪೊಲೀಸರು ಇನ್ನೂ ಮುಂದುವರಿಸಿದ್ದಾರೆ. ಒಂದಕ್ಕಿಂತ ಹೆಚ್ಚು ಗುರುತು ಚೀಟಿ ಹೊಂದಿರುವವರ ಮೇಲೂ ಪೊಲೀಸರು ತೀವ್ರ ನಿಗಾ ಇರಿಸತೊಡಗಿದ್ದಾರೆ. ವಲಸೆ ಕಾರ್ಮಿಕರ ಆಧಾರ್ ಕಾರ್ಡ್ ನಂಬ್ರವನ್ನು ಸಂಗ್ರಹಿಸಿ ಅದನ್ನು ಪರಿಶೀಲನೆಗಾಗಿ ಕೇಂದ್ರ ಹಾಗೂ ರಾಜ್ಯ ಐ.ಟಿ. ಇಲಾಖೆಗೆ ಕಳುಹಿಸಿ ಕೊಡಲಾಗುತ್ತಿದೆ ಎಂದು ರಾಜ್ಯ ಕಾನೂನು ಮತ್ತು ಸುವ್ಯವಸ್ಥೆಯ ಹೊಣೆಗಾರಿಕೆ ಹೊಂದಿರುವ ಎ.ಡಿ.ಪಿ. ಎಂ.ಆರ್. ಅಜಿತ್ ತಿಳಿಸಿದ್ದಾರೆ.

ರಾಜ್ಯದಲ್ಲಿ ನೆಲೆಸಿರುವ ಎಲ್ಲಾ ವಲಸೆ ಕಾರ್ಮಿಕರ ಮಾಹಿತಿಗಳನ್ನು ಅವರ ದಾಖಲು ಪತ್ರಗಳ ಸಹಿತ ಸಂಗ್ರಹಿಸಲಾಗುತ್ತಿದೆ. ಆ ಕುರಿತಾದ ಮಾಹಿತಿಗಳನ್ನು ಡಾಟಾದಲ್ಲಿ  ಸಂಗ್ರಹಿಸಲಾಗುತ್ತಿದೆ. ಇದಕ್ಕಾಗಿ ಎಲ್ಲಾ ಪಂಚಾಯತ್, ನಗರಸಭೆ ಮತ್ತು ನಗರ ಪಾಲಿಕೆಗಳ ವಾರ್ಡ್ ಸದಸ್ಯರ, ಆಯಾ ಪೊಲೀಸ್  ಠಾಣೆ ಗಳ ಠಾಣಾಧಿಕಾರಿಗಳ ಸಭೆಗಳಲ್ಲಿ ಪ್ರತೀ ವಾರ್ಡ್ ಮಟ್ಟಗಳಲ್ಲಿ ನಡೆಸಲಾಗುವುದು. ಇದಕ್ಕಾಗಿ ವಾರ್ಡ್ ಮಟ್ಟಗಳ ಸಮಿತಿಗಳಿಗೂ ರೂಪು ನೀಡಲಾಗುವುದು ಎಂದು ಎಡಿಜಿಪಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page