ರಾಜ್ಯ ಮಟ್ಟದ ಚುಟುಕು ಕೃತಿ ಸ್ಪರ್ಧೆ: ಶ್ರೀಕೃಷ್ಣಯ್ಯ ಅನಂತಪುರ ಅವರ ಕೃತಿ ಪ್ರಥಮ

ಕಾಸರಗೋಡು: ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಬೆಳ್ಳಿಹಬ್ಬ ಹಾಗೂ ಜಿಲ್ಲಾ ಸಮ್ಮೇಳನದ ಅಂಗವಾಗಿ ನಡೆದ ರಾಜ್ಯಮಟ್ಟದ ಚುಟುಕು ಕೃತಿಗಳ ಸ್ಪರ್ಧೆಯಲ್ಲಿ ಶ್ರೀ ಕೃಷ್ಣಯ್ಯ ಅನಂತಪುರ ಅವರ “ಎದೆ ಬಿಗಿದ ಕ್ಷಣಗಳು” ಕೃತಿ ಪ್ರಥಮ ಸ್ಥಾನ ಗಳಿಸಿದೆ. ವಿಠ್ಠಲ ಗಾಂವಕರ ಶೆಟಗೇರಿ ಅವರ “ಅವ್ವಳ ನುಡಿದಂಡೆ” ಎರಡನೆಯ ಬಹುಮಾನ, ಡಾ. ಪ್ರಭಾಕರ ನಾಯಕ ಅಂಕೋಲಾ ಅವರ “ಮಂಗಳಾರತಿ” ಮೂರನೆಯ ಬಹುಮಾನ ಪಡೆದಿದೆ. ಡಾ. ಮಲ್ಲಿಕಾರ್ಜುನ ಛಬ್ಬಿ ಅವರ “ಹನಿ ಹಣತೆ” ಮೆಚ್ಚುಗೆ ಪಡೆದ ಕೃತಿಯಾಗಿದೆ. ನಾಳೆ ಬೆಳಗಾವಿಯ ಮಹಾಂತೇಶ ನಗರದ ಮಹಾಂತ ಭವನದಲ್ಲಿ ಜರಗುವ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಬಹುಮಾನ ವಿತರಿಸಲಾಗುವುದು.

Leave a Reply

Your email address will not be published. Required fields are marked *

You cannot copy content of this page