ವಕ್ಫ್ ತಿದ್ದುಪಡಿ ವಿರುದ್ಧ ಸಮಸ್ತ ಕೇರಳ ಮದ್ರಸ ಮೆನೇಜ್ಮೆಂಟ್ ಅಸೋಸಿಯೇಶನ್ ಪ್ರತಿಭಟನೆ
ಉಪ್ಪಳ: ಕೇಂದ್ರ ಸರಕಾರ ಮಂಡಿಸಿದ ವಕ್ಫ್ ಕಾನೂನು ತಿದ್ದುಪಡಿ ಹಿಂತೆಗೆಯಬೇಕೆಂದು ಆಗ್ರಹಿಸಿ ಸಮಸ್ತ ಕೇರಳ ಮದ್ರಸ ಮೆನೇಜ್ಮೆಂಟ್ಅಸೋಸಿಯೇಶನ್ ಜಿಲ್ಲಾ ಸಮಿತಿಯ ಆಹ್ವಾನ ಪ್ರಕಾರ ಉಪ್ಪಳ ರೇಂಜ್ ಕಮಿಟಿ ನೇತೃತ್ವದಲ್ಲಿ ಉಪ್ಪಳ ಅಂಚೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಿದರು. ಮದ್ರಸ ಮೆನೇಜ್ಮೆಂಟ್ ಉಪ್ಪಳ ರೇಂಜ್ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಪಳ್ಳಂ ಅಧ್ಯಕ್ಷತೆ ವಹಿಸಿದರು. ಹಲವರು ಮಾತನಾಡಿದರು. ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರಗಾಮಿ ಆಕ್ರಮಣವನ್ನು ಸಭೆಯಲ್ಲಿ ಖಂಡಿಸಲಾಯಿತು. ಮೌನ ಪ್ರಾರ್ಥನೆ ನಡೆಸಲಾಯಿತು. ಪೋಪ್ರ ನಿಧನಕ್ಕೆ ಸಂತಾಪ ಸೂಚಿಸ ಲಾಯಿತು. ಅಬ್ದುಲ್ ಜಬ್ಬಾರ್ ಪತ್ವಾಡಿ ಸ್ವಾಗತಿಸಿ, ಮೊಹಮ್ಮದ್ ಉಪ್ಪಳಗೇಟ್ ವಂದಿಸಿದರು.