ವಯನಾಡ್ ಭೂಕುಸಿತ: ಸರಕಾರದ ಸ್ಯಾಲರಿ ಚಾಲೆಂಜ್‌ಗೆ ಹಣ ನೀಡಲು ಇನ್ನೂ 20,000ಕ್ಕೂ ಹೆಚ್ಚು ಮಂದಿ ಬಾಕಿ

ಕಾಸರಗೋಡು: ವಯನಾಡ್‌ನ ಮುಂಡಕೈ- ಚೂರಲ್ ಮಲೆಯಲ್ಲಿ ಸಂಭವಿಸಿದ ಭೂ ಕುಸಿತದ ಪುನರ್ವಸತಿ ನಿಧಿಗೆ ಸಹಾಯವೊದಗಿಸುವ ನಿಟ್ಟಿನಲ್ಲಿ ಸರಕಾರ ಹೊರಡಿಸಿದ ಸ್ಯಾಲರಿ ಚಾಲೆಂಜ್‌ಗೆ ಒಪ್ಪಿಗೆ ಪತ್ರ ನೀಡಿದವರಲ್ಲಿ ಇನ್ನೂ 20 ಸಾವಿರಕ್ಕೂ ಹೆಚ್ಚು ನೌಕರರು ಹಣ ನೀಡಲು ಬಾಕಿಯಿದ್ದಾರೆಂದು ತಿಳಿದು ಬಂದಿದೆ. ಅಂತವರು ತಮ್ಮ ಮೊತ್ತವನ್ನು ಶೀಘ್ರ ಮುಖ್ಯಮಂತ್ರಿಯ ಬರ ಪರಿಹಾರ ನಿಧಿಗೆ ಹಸ್ತಾಂತರಿಸಬೇಕೆಂದು ಸರಕಾರ ನಿರ್ದೇಶ ಹೊರಡಿಸಿದೆ.

ಪ್ರೊವಿಡೆಂಟ್ ಫಂಡ್ ಹಾಗೂ ಲೀವ್ ಸರಂಡರ್‌ನಿಂದ ಹಣ ನೀಡಲು ಒಪ್ಪಿಗೆ ಸೂಚಿಸಿದವರಲ್ಲಿ ಹಣ ನೀಡಲು ಬಾಕಿಯಿರುವುದಾಗಿ ಹೇಳಲಾಗುತ್ತಿದೆ. ಇದಕ್ಕೆ ನೌಕರರ ಅರ್ಜಿ ಹಾಗೂ ಬಿಲ್ ಮಂಜೂರು ಮಾಡಲು ಅನುಮತಿ ಅಗತ್ಯವಿದೆ. ಆದರೆ ಇದಕ್ಕೆ ನೌಕರರು ಹಿಂಜರಿಯುತ್ತಿದ್ದಾರೆ. ಹೀಗೆ ಧನಸಹಾಯ ನೀಡುವುದಾಗಿ ತಿಳಿಸಿದವರು ಮೊತ್ತ ಹಸ್ತಾಂತರಿಸಿದರೆಂಬ ಹೆಸರಲ್ಲಿ ಅವರ ಆದಾಯ ತೆರಿಗೆಯಲ್ಲಿ ಕಡಿತ ಮಾಡಲಾಗಿದೆ. ನೌಕರರ ಅನುಮತಿ ಹಾಗೂ ಅರ್ಜಿಗೆ ಕಾದು ನಿಲ್ಲದೆ ಶೀಘ್ರದಲ್ಲಿ ಹಣ ಪಡೆದು ಬರಪರಿಹಾರ ನಿಧಿಗೆ ಹಸ್ತಾಂತರಿಸಲು ವೇತನ ವಿತರಣೆಗೆ ಅಧಿಕಾರಿಗಳೊಂದಿಗೆ ಹಣಕಾಸು ಇಲಾಖೆ ಆಗ್ರಹಪಟ್ಟಿದೆ. ಹಣ ನೀಡದವರಲ್ಲಿ 5000ದಷ್ಟು ಮಂದಿ ಗಜೆಟೆಡ್ ಆಫೀಸರ್‌ಗಳಾಗಿದ್ದಾರೆ. ವಯನಾಡ್ ಸ್ಯಾಲರಿ ಚಾಲೆಂಜ್ಗೆ ಎಲ್ಲಾ ನೌಕರರು ಸಹಕರಿಸಿದರೆ 500 ಕೋಟಿ ರೂಪಾಯಿ ಸಂಗ್ರಹಿಸುವ ಗುರಿಯನ್ನು ಸರಕಾರ ಹೊಂದಿತ್ತು. ಆದರೆ 2025 ಮಾರ್ಚ್ 10ರವರೆಗಿನ ಲೆಕ್ಕಾಚಾರ ಪ್ರಕಾರ 231.21 ಕೋಟಿ ರೂಪಾಯಿ ಮಾತ್ರವೇ ಸರಕಾರಕ್ಕೆ ಲಭಿಸಿದೆ. ಒಟ್ಟು 96653 ಮಂದಿ ನೌಕರರು ಸ್ಯಾಲರಿ ಚಾಲೆಂಜ್ಗೆ ಒಪ್ಪಿಗೆ ಪತ್ರ ನೀಡಿದ್ದಾರೆ. ಈ ಪೈಕಿ 71016 ಮಂದಿ ಹಣ ನೀಡಿದ್ದಾರೆ. ಇನ್ನು 20537 ಮಂದಿ ಹಣ ನೀಡಲು ಬಾಕಿಯಿದ್ದಾರೆಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *

You cannot copy content of this page