ವರ್ಕಾಡಿಯಲ್ಲಿ ಮೂರು ಬೈತುರಹ್ಮಗಳಿಗೆ ಶಿಲಾನ್ಯಾಸ

ವರ್ಕಾಡಿ: ದುಬಾ ಕೆಎಂಸಿಸಿ ವರ್ಕಾಡಿ ಪಂಚಾಯತ್ ಸಮಿತಿ ಹಾಗೂ ಮಂಜೇಶ್ವರ ಮಂಡಲ ಸಮಿತಿಗಳ ಸಹಕಾರದೊಂದಿಗೆ ವರ್ಕಾಡಿ ಪಂಚಾಯತ್ ಮುಸ್ಲಿಂ ಲೀಗ್ ಮುಖಾಂತರ ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ಮಿಸುವ ಮೂರು ಬೈತುರಹ್ಮ(ಮನೆ)ಗಳ ಶಿಲಾನ್ಯಾಸ ನಡೆಸಲಾಯಿತು. ಪಾವೂರಿನಲ್ಲಿ ನಿರ್ಮಿಸುವ ಬೈತುರಹ್ಮದ ಶಿಲಾನ್ಯಾಸ ಕಾರ್ಯಕ್ರಮ ಎನ್‌ಪಿಎಂ ಹಾಮಿದ್ ಕೋಯ ತಂಙಳ್ ಕುನ್ನುಂಗೈ, ಧರ್ಮನಗರದಲ್ಲಿ ಗಾಂಧಿನಗರ ಸಯ್ಯಿದ್ ಶಂಸುದ್ದೀನ್ ತಂಙಳ್, ಆನೆಕಲ್ಲಿನಲ್ಲಿ ಸಯ್ಯಿದ್ ಇಬ್ರಾಹಿಂ ಬಾತಿಷ ತಂಙಳ್ ಆನೆಕಲ್ಲು ನೇತೃತ್ವ ನೀಡಿದರು. ಶಾಸಕ ಎಕೆಎಂ ಅಶ್ರಫ್ ಮುಖ್ಯ ಅತಿಥಿಯಾಗಿದ್ದರು.  ಪಾವೂರು ಜುಮಾ ಮಸೀದಿ ಖತೀಬ್ ಮಶ್‌ಹೂಕ್ ಫೈಸಿ, ಮಚ್ಚಂಪಾಡಿ ಜುಮಾಮಸೀದಿ ಮದರಿಸ್ ಶರೀಫ್ ಹೈದಮಿ, ಶುಭಾಶಂಸನೆಗೈದರು. ಮುಸ್ಲಿಂ, ಕೆಎಂಸಿಸಿ ಹಾಗೂ ಪೋಷಕ ಸಂಘಟನೆಗಳ ನೇತಾರರಾದ ಅಬ್ದುಲ್ ಅಸೀಸ್ ಹಾಜಿ ಮರಿಕ್ಕೆ,ಎ.ಕೆ. ಆರಿಫ್, ಯು.ಕೆ. ಸೈಫುಲ್ಲ ತಂಙಳ್, ಪಿ.ಬಿ. ಅಬೂಬಕರ್ ಪಾತೂರು, ಅಯ್ಯೂಬ್ ಉರ್ಮಿ, ಅಲಿ ಹಾಜಿ ಧರ್ಮನಗರ, ಮನ್ಸೂರ್ ಆನೆಕಲ್ಲು ರಾಸಿಕ್ ಕೆದುಂಬಾಡಿ, ರಾಸಿಕ್ ಮಚ್ಚಂಪಾಡಿ, ಮುಹಮ್ಮದ್ ಕಳಾಯಿ, ಕೆ. ಮುಹಮ್ಮದ್, ಅಬ್ದುಲ್ ಮಜೀದ್ ಬಿ, ಮೂಸ ಹಾಜಿ ತೋಕೆ, ಎ.ಕೆ. ಉಮರಬ್ಬ, ಬಾವಹಾಜಿ, ಸಿದ್ದಿಕ್ ಬದಿಯೂರು, ವಿ.ಎಸ್. ಮುಹಮ್ಮದ್, ಹನೀಫ್ ಕಾನಕ್ಕೋಡಿ, ಸುಬೈರ್ ಮಾಸ್ತರ್, ಇಬ್ರಾಹಿಂ ಕಜೆ, ಹಾರಿಸ್ ಪಾವೂರು, ರಸಾಕ್ ಕೆದುಂಬಾಡಿ, ಎ.ಎಂ. ಅಶ್ರಫ್, ಅನ್ವರ್ ಎ, ಮೊಯ್ದೀನ್ ಓಡಂಗಳ, ಫಾರೂಕ್ ರಶೀದ್, ಅಬೂಬಕರ್ ಮಾಂಕೋಡಿ, ಇಬ್ರಾಹಿಂ ಹಾಜಿ ಕೊಮ್ಮಂಗುದಿ ಭಾಗವಹಿಸಿದರು.

Leave a Reply

Your email address will not be published. Required fields are marked *

You cannot copy content of this page