ವಾಲಿಕೊಂಡು ನಿಂತು ಭೀತಿಗೆ ಕಾರಣವಾದ ವಿದ್ಯುತ್ ಕಂಬಗಳು: ಬದಲಿಸಲು ಊರವರ ಒತ್ತಾಯ

ಉಪ್ಪಳ: ಮಳೆ, ಗಾಳಿ ತೀವ್ರಗೊಳ್ಳಲಿರುವಂತೆÀ ಯಾವುದೇ ಕ್ಷಣದಲ್ಲಿ ಕುಸಿದು ಅನಾಹುತ ಸಂಭವಿಸಬಹುದಾದ ವಿದ್ಯುತ್ ಕಂಬಗಳನ್ನು ತೆರವುಗೊಳಿಸಲು ಊರವರು ಒತ್ತಾಯಿಸಿದ್ದಾರೆ. ಮಂಗಲ್ಪಾಡಿ ಪಂಚಾಯತ್‌ನ ಉಪ್ಪಳ ವಿದ್ಯುತ್ ಸೆಕ್ಷನ್ ವ್ಯಾಪ್ತಿಗೊಳಪಟ್ಟ ಪ್ರತಾಪನಗರದ ಒಳರಸ್ತೆಯಲ್ಲಿ ಎರಡು ವಿದ್ಯುತ್ ಕಂಬ ಆತಂಕ ಸೃಷ್ಟಿಸಿದೆ. ಈ ಹಿಂದೆ ನೀರು ಹರಿಯುವ ಚರಂಡಿಯಲ್ಲಿ ಕಂಬವನ್ನು ಸ್ಥಾಪಿಸಲಾಗಿತ್ತು. ಇಲ್ಲಿ ಮಳೆ ನೀರು ಹರಿದು ಬುಡದ ಮಣ್ಣು ಸವೆದು ಕಂಬ ಒಂದು ಭಾಗಕ್ಕೆವಾಲಿದೆ.
ಮಳೆ, ಗಾಳಿಗೆ ಯಾವುದೇ ಹೊತ್ತಲ್ಲಿ ಕುಸಿದು ಬೀಳುವ ಸ್ಥಿತಿಯಲ್ಲಿರುವುದು ಸ್ಥಳೀಯರನ್ನು ಭೀತಿಗೊಳಗಾಗುವಂತೆ ಮಾಡಿದೆ. ಈ ಪರಿಸರದಲ್ಲಿ ಮನೆಗಳು ಹಾಗೂ ರಸ್ತೆಯಿಂದ ಮದ್ರಾಸ ಸಹಿತ ಶಾಲೆಗೆ ಮಕ್ಕಳು ನಡೆದು ಹÉÆÃಗುತ್ತಿದ್ದಾರೆ. ನಿರಂತರ ವಾಹನ ಸಂಚಾರ ವಿರುವ ಪ್ರದೇಶವಾಗಿದೆ. ಈ ಬಗ್ಗೆ ಸಂಬAಧಪಟ್ಟ ಉದ್ಯೋಗಸ್ಥರಲ್ಲಿ ವಾರ್ಡ್ ಜನಪ್ರತಿ ನಿಧಿ ಹಾಗೂ ಸ್ಥಳೀಯರು ತಿಳಿಸಿದರೂ ಬದಲಾಯಿಸುವ ಕ್ರಮಕ್ಕೆ ಮುಂದಾಗುತ್ತಿಲ್ಲವೆAದು ದೂರಲಾಗಿದೆ. ಕುಸಿದು ಬಿದ್ದು ಅನಾಹುತ ಸಂಭವಿಸುವ ಮುನ್ನವೇ ಅಧಿಕಾರಿಗಳು ಎಚ್ಚೆತ್ತು ಕಂಬಗಳನ್ನು ಬದಲಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page