ವಿದ್ಯಾರ್ಥಿ ಬಿದ್ದು ಸಾವು

ಕಾಸರಗೋಡು: ಮೂಲತಃ ಕಾಸರಗೋಡು ನೆಲ್ಲಿಕುಂಜೆ ಬಂಗರಗುಡ್ಡೆ ನಿವಾಸಿ ಹಾಗೂ ಈಗ ಮಂಗಳೂರಿನಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಚೆಮ್ನಾಡು ಮುಹಮ್ಮದಲಿ-ಸೀನತ್ ದಂಪತಿ ಪುತ್ರ ಸಮೀರ್ (18) ಸಾವನ್ನಪ್ಪಿದ ಯುವಕ. ಈತ ಪದವಿ ವಿದ್ಯಾರ್ಥಿಯಾಗಿದ್ದಾನೆ. ಮೃತನು ಹೆತ್ತವರ ಹೊರತಾಗಿ ಸಹೋದರ-ಸಹೋದರಿಯರಾದ ಮಿರ್ಸಾದ್, ಶಾಹಿನ್, ಶಹಲ ಹಾಗೂ ಅಪಾರ ಬಂಧ-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page