ಸಚಿವ ಕೆ. ರಾಧಾಕೃಷ್ಣನ್ ಲೋಕಸಭೆಗೆ: ಪಿಣರಾಯಿ ಸಚಿವ ಸಂಪುಟ ಪುನರ್ ರಚನೆ ಸಾಧ್ಯತೆ

ತಿರುವನಂತಪುರ: ದೇವಸ್ವಂ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ  ಖಾತೆ ಸಚಿವ ಕೆ. ರಾಧಾಕೃಷ್ಣನ್ ಆಲತ್ತೂರಿನಿಂದ ಲೋಕಸಭೆಗೆ ಚುನಾಯಿತರಾಗುವುದರೊಂದಿಗೆ ಪಿಣರಾಯಿ ವಿಜಯನ್ ಸಚಿವ ಸಂಪುಟದಲ್ಲಿ  ಪುನರ್ ರಚನೆಗೆ ಸಾಧ್ಯತೆ ಹೆಚ್ಚಿದೆ. ಈ ಕುರಿತಾಗಿ  ಸಿಪಿಎಂ ರಾಜ್ಯ ಸೆಕ್ರೆಟರಿಯೇಟ್ ರಾಜ್ಯ ಸಮಿತಿ ಸಭೆಗಳಲ್ಲಿ ಚರ್ಚೆಯಾಗುವ ಸಾಧ್ಯತೆಯಿದೆ.   ಸಂಸದನಾಗಿ ಚುನಾಯಿತರಾದ ಬಗ್ಗೆ ನೋಟಿಫಿಕೇಶನ್ ಜ್ಯಾರಿಗೊಳಿಸಿದ ಎರಡು ವಾರದೊಳಗೆ ವಿಧಾನಸಭಾ ಸದಸ್ಯತ್ವಕ್ಕೆ  ರಾಜೀನಾಮೆ ನೀಡಬೇಕೆಂಬ ನಿಬಂಧನೆಯಿದೆ.  ರಾಧಾಕೃಷ್ಣನ್ ವಹಿಸಿಕೊಂಡಿದ್ದ ಖಾತೆಗೆ ಬೇರೆ ಯಾರನ್ನು ನೇಮಿಸಬೇಕೆಂದು ಸಿಪಿಎಂ ಸಭೆಯಲ್ಲಿ ನಿರ್ಧರಿಸುವ ಸಾಧ್ಯತೆಯಿದೆ. ಹೊಸ ಸಚಿವರನ್ನು ನೇಮಿಸುವುದರೊಂದಿಗೆ ಸಚಿವ ಸಂಪುಟದಲ್ಲಿ ಬದಲಾವಣೆ ಉಂಟುಮಾಡುವ ಕುರಿತೂ ಚರ್ಚೆಯಾಗಲಿದೆ. ಸಚಿವರು ಖಾತೆಗಳ ಬದಲಾವಣೆ ವಿಷಯದಲ್ಲೂ ನಿರ್ಧಾರ ಉಂಟಾಗಲಿದೆಯೆಂದು ಹೇಳಲಾಗುತ್ತಿದೆ.

RELATED NEWS

You cannot copy contents of this page