ಸಿಪಿಎಂ ಕಾರ್ಯಕರ್ತ ನಿಧನ
ಪೈವಳಿಕೆ: ಚಿಪ್ಪಾರು ನಡುವಳ ಚ್ಚಾಲ್ ರಾಧಾಕೃಷ್ಣ ಶೆಟ್ಟಿ (61) ನಿಧನಹೊಂದಿದರು. ಸಿಪಿಎಂ ಕಾರ್ಯಕರ್ತನಾಗಿದ್ದ ಇವರು ಕೃಷಿಕನಾಗಿದ್ದರು. ಮೃತರು ಪತ್ನಿ ವಿಜಯಲಕ್ಷ್ಮಿ, ಮಕ್ಕಳಾದ ಶರಣ್ಯ, ಶಿವಾನಿ, ಸಹೋದರಿಯರಾದ ಶಾಂಭವಿ, ಬೇಬಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಸಹೋದರ ಪುರುಷೋತ್ತಮ ಈ ಹಿಂದೆ ನಿಧನಹೊಂದಿದ್ದಾರೆ. ಸಿಪಿಎಂನ ಮಖಂಡರು ಮನೆಗೆ ತೆರಳಿ ಸಂತಾಪ ಸೂಚಿಸಿದರು. ನಿಧನಕ್ಕೆ ಸಿಐಟಿಯು, ಜನಶಕ್ತಿ ಫ್ರೆಂಡ್ಸ್ ಕ್ಲಬ್ ಗ್ರಂಥಾಲಯ ಸಂತಾಪ ಸೂಚಿಸಿದೆ.