ಸಿಪಿಎಂ ಕಾರ್ಯಕರ್ತ ನಿಧನ

ಉಪ್ಪಳ: ಮಂಗಲ್ಪಾಡಿ ಬೇರಿಕೆ ನಿವಾಸಿ  ಸಿಪಿಎಂ ನೇತಾರ ದಿ| ನಾರಾಯಣರ ಪುತ್ರ  ಸಿಪಿಎಂ ಕಾರ್ಯಕರ್ತ ಶೇಷಾದ್ರಿ (47)  ನಿಧನರಾದರು. ಲಿವರ್ ಸಂಬಂಧ ಅಸೌಖ್ಯದಿಂದ ಬಳಲುತ್ತಿದ್ದರು.  ಅವಿವಾಹಿತರಾಗಿದ್ದರು. ಮೃತರು ತಾಯಿ ಕಮಲ, ಸಹೋದರಿಯರಾದ ಶೈಲಜ, ಸೋನಿಯಾ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಸಹೋದರಿ ಸುಮಿತ ಈ ಹಿಂದೆ ನಿಧನರಾಗಿದ್ದಾರೆ.

ಮೃತರ ಮನೆಗೆ ಶಾಸಕ ಸಿ.ಎಚ್ ಕುಂಞಂಬು, ಮಾಜಿ ಶಾಸಕ ಸತೀಶ್ಚಂದ್ರನ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಸಹಿತ ಹಲವಾರು ಮಂದಿ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page