ಸೆಕ್ಯುರಿಟಿ ನೌಕರ ಕುಸಿದುಬಿದ್ದು ನಿಧನ
ಕಾಸರಗೋಡು: ಕೇಳುಗುಡ್ಡೆ ಶಾಸ್ತಾ ಕೃಪಾದ ಬಾಲಕೃಷ್ಣ (73) ಎಂಬ ವರು ಕುಸಿದು ಬಿದ್ದು ಮೃತಪಟ್ಟರು. ನಗರದ ಖಾಸಗಿ ಸಂಸ್ಥೆಯಲ್ಲಿ ಸೆಕ್ಯೂರಿಟಿ ನೌಕರನಾಗಿ ದ್ದರು. ಇಂದು ಬೆಳಿಗ್ಗೆ ಮನೆಯೊಳಗೆ ಕುಳಿತಿದ್ದಾಗ ಕುಸಿದುಬಿದ್ದು ನಿಧನಸಂಭವಿಸಿದೆ. ಮೃತರು ಪತ್ನಿ ಸುಗುಣ, ಪುತ್ರ ಪವನ್ (ಕಾಸರಗೋಡು ಕೋ ಆಪರೇಟಿವ್ ಟೌನ್ ಬ್ಯಾಂಕ್ ನೌಕರ) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿ ದ್ದಾರೆ. ಓರ್ವೆ ಪುತ್ರಿ ಸ್ವಾತಿ ಈ ಹಿಂದೆ ನಿಧನರಾಗಿದ್ದಾರೆ.