ಚುನಾವಣೆ: ಆಯುಧ ಸ್ವಾಧೀನದಲ್ಲಿರಿಸುವುದಕ್ಕೆ ನಿಷೇಧ

ಕಾಸರಗೋಡು: ೨೦೨೪ರ ಸಾರ್ವತ್ರಿಕ ಚುನಾವಣೆಯಲ್ಲಿ ಶಾಂತಿ ಪಾಲಿಸಲು ಸಾರ್ವಜನಿಕರ ಸಂರಕ್ಷಣೆ ಖಚಿತಪಡಿಸಲು ಕಾಸರಗೋಡು ಜಿಲ್ಲಾ ವ್ಯಾಪ್ತಿಯ ವ್ಯಕ್ತಿಗಳು ಪರವಾನಗಿ ಇರುವ ಆಯುಧಗಳನ್ನು ಸ್ವಾಧೀನದಲ್ಲಿರಿಸುವುದು, ಸಾಗಾಟ ನಡೆಸುವುದನ್ನು ಜಿಲ್ಲಾಧಿಕಾರಿ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಯಾರಾದರೂ ಆಯುಧವನ್ನು ಸ್ವಾಧೀನದಲ್ಲಿಸಿದರೆ ಕ್ರಿಮಿನಲ್ ಕಾಯ್ದೆ ೧೯೭೩ ಸೆಕ್ಷನ್ ೧೪೪ರ ಪ್ರಕಾರ ಜಿಲ್ಲಾ ಮೆಜಿಸ್ಟ್ರೇಟ್ ಕ್ರಮ ಕೈಗೊಳ್ಳುವರು. ಚುನಾವಣೆ ಘೋಷಣೆ ದಿನದಿಂದ ಫಲಿಕಾಂಶ ಪ್ರಕಟಗೊಳ್ಳು ವವರೆಗೆ ನಿಷೇಧ ಜ್ಯಾರಿಯಲ್ಲಿರಲಿದೆ.

Leave a Reply

Your email address will not be published. Required fields are marked *

You cannot copy content of this page