ತೃಶೂರು ಪೂರಂ ವಿವಾದ ಇತರ ಗಂಭೀರ ವಿಷಯಗಳಿಂದ ಜನರ ಗಮನ ಬೇರೆಡೆ ತಿರುಗಿಸುವ ಯತ್ನ-ಕೆ. ಸುರೇಂದ್ರನ್

ಕಾಸರಗೋಡು: ತೃಶೂರು ಪೂರಂ ಹೆಸರಲ್ಲಿ ಸೃಷ್ಟಿಸಲಾಗುತ್ತಿರುವ ವಿವಾದ ಇತರ ಗಂಭೀರ ವಿಷಯಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸುವ ಯತ್ನದ ಒಂದು ಭಾಗವಾಗಿದೆಯೆಂದು ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ಹೇಳಿದ್ದಾರೆ. ನಗರದಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.

 ತಿರೂರಂಬಾಡಿ ಮುಜರಾಯಿ ಯನ್ನು ಆರೋಪಿ ಸ್ಥಾನದಲ್ಲಿ ಕುಳ್ಳಿರಿಸುವ ಯತ್ನವನ್ನು ಅಂಗೀಕರಿಸುವಂತಿಲ್ಲ. ತೃಶೂರು ಪೂರಂ ವಿಷಯದಲ್ಲಿ ಸಮಸ್ಯೆಗಳಿದ್ದಲ್ಲಿ ಅದಕ್ಕೆ ರಾಜ್ಯ ಗೃಹಖಾತೆ ಉತ್ತರ ನೀಡಬೇಕಾಗಿದೆ.  ಇದರ ಮರೆಯಲ್ಲಿ ಇತರ ಗಂಭೀರ ವಿಷಗಳಿಂದ ಜನರ ಗಮನ ಬೇರೆಡೆಗೆ ಸೆಳೆಯುವಂತೆ ಮಾಡುವ ಯತ್ನದಲ್ಲಿ ಸರಕಾರ ತೊಡಗಿದೆಯೆಂದು ಸುರೇಂದ್ರನ್ ಹೇಳಿದ್ದಾರೆ.

ಜನರ ಬೆಂಬಲದಿಂದಲೇ ತೃಶೂರಿನಲ್ಲಿ ನಟ ಸುರೇಶ್‌ಗೋಪಿ ಗೆದ್ದಿದ್ದಾರೆ. ಆದರೆ ಅವರ ಗೆಲುವಿನ ಪ್ರಕಾಶವನ್ನು ಕೆಡಿಸುವಂತೆ ಮಾಡುವ ಯತ್ನವನ್ನು ಇನ್ನೊಂದೆಡೆ ಯುಡಿಎಫ್ ಮತ್ತು ವಿಪಕ್ಷ ನಾಯಕರು ನಡೆಸುತ್ತಿದ್ದಾರೆ. ಈ ವಿಷಯದಲ್ಲಿ ಕಾಂಗ್ರೆಸ್‌ನ ದೌರ್ಬಲ್ಯಗಳ ಬಗ್ಗೆ ಚರ್ಚೆ ನಡೆಸಬೇಕಾಗಿದೆಯೆಂದು ಕಾಂಗ್ರೆಸ್ ಉಮೇದ್ವಾರರಾಗಿದ್ದ ಕೆ. ಮುರಳೀಧ ರನ್ ಹೇಳಿದ್ದಾರೆ. ಬಿತ್ತಿದಲ್ಲಿ ಮೊಳಕೆಯೊಡೆಯದ ಸುಳ್ಳುಗಳ ಸರಮಾಲೆಗಳನ್ನೇ ಈ ವಿಷಯದಲ್ಲಿ ಸಿಪಿಎಂ ಮತ್ತು ಕಾಂಗ್ರೆಸ್ ನಡೆಸುತ್ತಿದೆಯೆಂದು ಸುರೇಂದ್ರನ್ ಹೇಳಿದ್ದಾರೆ

Leave a Reply

Your email address will not be published. Required fields are marked *

You cannot copy content of this page