ಬದಿಯಡ್ಕ ಶ್ರೀ ಗಣೇಶೋತ್ಸವಕ್ಕೆ ವೈಭವದ ತೆರೆ

ಬದಿಯಡ್ಕ: ಇಲ್ಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವದ ವಿಗ್ರಹ ಜಲಸ್ತಂಭನಾ ಶೋಭಾಯಾತ್ರೆ ನಿನ್ನೆ ಅಪರಾಹ್ನ ವೈಭವದಿಂದ ಬದಿಯಡ್ಕ ಪೇಟೆಯಲ್ಲಿ ಜರಗಿತು.

ಶೋಭಾಯಾತ್ರೆಯಲ್ಲಿ ಸಿಂಗಾರಿಮೇಳ, ಸಂಚಾರಿ ಭಕ್ತಿ ರಸಮಂಜರಿ, ಪೂಕಾವಡಿ, ಕುಣಿತ ಭಜನೆ, ಹುಲಿ ಕುಣಿ, ಮಂಕಿಶೋ, ನಾಸಿಕ್ ಬ್ಯಾಂಡ್, ಸ್ತಬ್ಧ ಚಿತ್ರ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು. ಪೆರಡಾಲ ಶ್ರೀ ಉದನೇಶ್ವರ ದೇವಾಲಯದ ಮುಂಭಾಗದ ವರದ ನದಿ ತಟದಲ್ಲಿ ವಿಗ್ರಹ ಜಲಸ್ತಂಭನೆ ಜರಗಿತು. ಇದಕ್ಕೂ ಮೊದಲು ಧಾರ್ಮಿಕ ಸಭೆ, ನೃತ್ಯ ಸಂಭ್ರಮ, ಕೈಕೊಟ್ಟು ಕಳಿ, ಭಜನೆ, ಸ್ಯಾಕ್ಸೋಪೋನ್ ವಾದನ, ಗಾನ ಚತುರ್ಥಿ ಸಹಿತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.

Leave a Reply

Your email address will not be published. Required fields are marked *

You cannot copy content of this page