ಮಂಜೇಶ್ವರ ಚುನಾವಣಾ ತಕರಾರು ಪ್ರಕರಣ: ಹೈಕೋರ್ಟ್‌ಗೆ ರಿವಿಶನ್ ಪಿಟೀಶನ್ ಸಲ್ಲಿಸಲು ಸರಕಾರ ತೀರ್ಮಾನ

ಕಾಸರಗೋಡು: ಮಂಜೇಶ್ವರ ಚುನಾವಣಾ ತಕರಾರು ಪ್ರಕರಣದಲ್ಲಿ ಆರೋಪಿಗಳನ್ನಾಗಿ ಹೆಸರಿಸಲಾಗಿದ್ದ ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ಸೇರಿದಂತೆ ಇತರ ಎಲ್ಲಾ ಆರು ಮಂದಿಯನ್ನು ದೋಷಮುಕ್ತ ಗೊಳಿಸಿದ ಕಾಸರಗೋಡು ಜಿಲ್ಲಾ ಸೆಶನ್ಸ್ ನ್ಯಾಯಾಲಯದ ತೀರ್ಪಿನ ವಿರುದ್ಧ ಹೈಕೋರ್ಟ್‌ಗೆ ರಿವಿಷನ್ ಪಿಟಿಶನ್ ಅರ್ಜಿ ಸಲ್ಲಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ.  ಈ ಬಗ್ಗೆ  ಪ್ರಕರಣದ ತನಿಖಾಧಿಕಾರಿಗಳು ಜಿಲ್ಲಾ ಪಬ್ಲಿಕ್ ಪ್ರೋಸಿಕ್ಯೂಟರ್‌ರಿಂದ ಈಗಾಗಲೇ ಕಾನೂನು ಸಲಹೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಗ ಳನ್ನಾಗಿ ಹೆಸರಿಸಿರುವವರು ದೋಷ ಮುಕ್ತರಾದುದರ ಹಿಂದೆ ರಾಜ್ಯ ಸರಕಾರ ಮತ್ತು ಸಿಪಿಎಂ ಪರಸ್ಪರ ಹೊಂದಾಣಿಕೆ ಮಾಡಿಕೊಂಡಿತ್ತೆಂದೂ ಯುಡಿಎಫ್ ಆರೋಪಿಸಿತ್ತು. ಆದರೆ ಅಂತಹ ಆರೋಪಗಳು ಸಿಪಿಎಂ ಮಾತ್ರವಲ್ಲ ಮತ್ತು ಬಿಜೆಪಿ ಕೂಡಾ ಅಲ್ಲಗಳೆದಿತ್ತು. ಇದರ ಬೆನ್ನಲ್ಲೇ ರಿವಿಶನ್ ಪಿಟೀಶನ್ ಅರ್ಜಿ ಸಲ್ಲಿಸಲು ಸರಕಾರ ಈಗ ಮುಂದಾಗಿದೆ.

Leave a Reply

Your email address will not be published. Required fields are marked *

You cannot copy content of this page