ಮೀಂಜ ಬೇರಿಕೆಯಲ್ಲಿ 112.32 ಲೀಟರ್ ಕರ್ನಾಟಕ ಮದ್ಯ ವಶ: ಓರ್ವ ಸೆರೆ

ಮಂಜೇಶ್ವರ: ಲೋಕಸಭಾ ಚುನಾ ವಣೆ ಪ್ರಕ್ರಿಯೆಗಳು ಆರಂಭಗೊಂ ಡಿರುವಂತೆಯೇ ಗಡಿಪ್ರದೇಶಗಳ ಮೂಲಕ ಭಾರೀ ಪ್ರಮಾಣದಲ್ಲಿ ಮದ್ಯ ಹಾಗೂ  ಮಾದಕದ್ರವ್ಯ ಹರಿದುಬರುವ ಬಗ್ಗೆ ಅಬಕಾರಿ ಇಲಾಖೆಗೆ ಸ್ಪಷ್ಟ ಮಾಹಿತಿ ಲಭಿಸಿದೆ.

ಇದರಂತೆ ಅಬಕಾರಿ ತಂಡ   ಮೀಂಜ ಬೇರಿಕೆಯಲ್ಲಿ ನಿನ್ನೆ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ೧೧೨.೩೨ ಲೀಟರ್ ಕರ್ನಾಟಕ ಮದ್ಯ ವನ್ನು  ಪತ್ತೆಹಚ್ಚಿ ವಶಕ್ಕೆ ತೆಗೆದು ಕೊಂಡಿದೆ. ಇದಕ್ಕೆ ಸಂಬಂಧಿಸಿ ಬೇರಿಕೆಯ ರಾಧಾಕೃಷ್ಣ(೫೪) ಎಂಬಾತನನ್ನು ಬಂಧಿಸಿ ಆತನ ವಿರುದ್ಧ ಅಬಕಾರಿ ಪ್ರಕರಣ ದಾಖಲಿಸಲಾಗಿದೆ.

ಕಾಸರಗೋಡು ಎಕ್ಸೈಸ್ ಎನ್ ಫೋರ್ಸ್‌ಮೆಂಟ್ ಆಂಡ್ ಆಂಟಿ ನಾರ್ಕೋಟಿಕ್ಸ್ ಸ್ಪೆಷಲ್ ಸ್ಕ್ವಾಡ್‌ನ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್)  ಮುರಳಿ ಕೆ.ವಿ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ. ಈ ತಂಡದಲ್ಲಿ ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಪ್ರಜಿತ್ ಕೆ.ಆರ್, ಮಂಜುನಾಥ ವಿ ಮತ್ತು ನಸರುದ್ದೀನ್ ಎಂಬವರು ಒಳಗೊಂಡಿದ್ದರು.

ರಾಜಪುರಂ ಮಾಲಕ್ಕಲ್ಲ್ ಎಂಬಲ್ಲಿ ೪೫.೫ ಲೀಟರ್ ವಿದೇಶ ಮದ್ಯ ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ. ಮಾಲಕ್ಕಲ್ಲ್ ನಿವಾಸಿ ಸನೀಶ್ ನೈಮನ್ (೩೭) ಎಂಬಾತನನ್ನು ರಾಜಪುರಂ ಪೊಲೀಸರು ಬಂಧಿಸಿದ್ದಾರೆ. ಮದ್ಯವನ್ನು ೯೧ ಪ್ಲಾಸ್ಟಿಕ್ ಬಾಟ್ಲಿಗಳಲ್ಲಿ ತುಂಬಿಸಿಡಲಾಗಿತ್ತು.

ಲೋಕಸಭಾ ಚುನಾವಣೆ ಪ್ರಕ್ರಿಯೆ ಆರಂಭಗೊಂಡ ಬಳಿಕ ಅಂತಾರಾಜ್ಯ ಮದ್ಯ ಮಾಫಿಯಾಗಳು ಇನ್ನಷ್ಟು ಸಕ್ರಿಯಗೊಂಡಿದ್ದಾರೆ. ಇವರು ತಮ್ಮ ಮಧವರ್ತಿಗಳ ಮೂಲಕ ಜಿಲ್ಲೆಗೆ ಮದ್ಯ ಮತ್ತಿತರ ಮಾದಕ ಸಾಮಗ್ರಿಗಳನ್ನು ಸಾಗಿಸುತ್ತಿದ್ದಾರೆ.  ಇಂತಹ ಮದ್ಯ ಮಾಫಿಯಾಗಳನ್ನು ಕೇಂದ್ರೀಕರಿಸಿ ಸಮಗ್ರ ತನಿಖೆ ನಡೆಸಲಾಗುತ್ತಿದೆಯೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಇದರಂತೆ ಜಿಲ್ಲೆಯ ಎಲ್ಲಾ ಗಡಿ ಪ್ರದೇಶಗಳಲ್ಲಿ ಅಬಕಾರಿ ತಂಡ ಬಿಗಿ ತಪಾಸಣೆ ಆರಂಭಿಸಿದೆ. ಇನ್ನೊಂದೆಡೆ ಪೊಲೀಸರು ಮತ್ತು ಚುನಾವಣಾ ಆಯೋ ಗದ ವಿಶೇಷ ತಂಡಗಳೂ ಗಡಿಪ್ರದೇ ಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.

125 ಲೀಟರ್ ಹುಳಿರಸ ಪತ್ತೆ

ಕಾಸರಗೋಡು: ನೀಲೇಶ್ವರ ರೇಂಜ್‌ನ ಎಕ್ಸೈಸ್ ಇನ್ಸ್‌ಪೆಕ್ಟರ್ ಜಿಜಿನ್ ಕುಮಾರ್ ನೇತೃತ್ವದ ಅಬಕಾರಿ ತಂಡ ಮತ್ತು ಅರಣ್ಯ ಇಲಾಖೆಯ ಭೀಮನಡಿ ಸೆಕ್ಷನ್‌ನ ಕೊನ್ನಕ್ಕಾಡ್ ಬೀಚ್‌ನ ಅರಣ್ಯ ಸಿಬ್ಬಂದಿಗಳು ಸೇರಿ ವೆಳ್ಳರಿಕುಂಡ್ ಮಾಲೋಂ ವಾಳ ತ್ತೋಟ್‌ನಲ್ಲಿ ನಿನ್ನೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಕಳ್ಳಬಟ್ಟಿ ಸಾರಾಯಿ ತಯಾರಿಸಲೆಂದು ಸಿದ್ಧಪಡಿಸಲಾಗಿದ್ದ ೧೨೫ ಲೀಟರ್ ಹುಳಿರಸ (ವಾಶ್) ಪತ್ತೆ ಹಚ್ಚಿ ವಶಪಡಿಸಿಕೊಳ್ಳಲಾಗಿದೆ. ಆದರೆ ಈ ಮಾಲನ್ನು ಅಲ್ಲಿ ಬಚ್ಚಿಟ್ಟವರನ್ನು ಗುರುತಿಸಲು ಸಾಧ್ಯವಾಗಲಿಲ್ಲ.

Leave a Reply

Your email address will not be published. Required fields are marked *

You cannot copy content of this page