ರೈಲು ಢಿಕ್ಕಿ ಹೊಡೆದು ಲಾಟರಿ ಮಾರಾಟಗಾರ ಮೃತ್ಯು

ಹೊಸದುರ್ಗ: ನೀಲೇಶ್ವರದಲ್ಲಿ ಲಾಟರಿ ಮಾರಾಟಗಾರ ರೈಲುಗಾಡಿ ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಟ್ಟಾಚ್ಚೇರಿಯ ಕೈವೇಲಿಕ್ಕಲ್ ನಿವಾಸಿ ಕೆ. ಕುಮಾರನ್ (65) ಮೃತಪಟ್ಟವರು. ಇಂದು ಬೆಳಿಗ್ಗೆ 9.30ರ ವೇಳೆ ತಿರುವನಂತಪುರ- ಮಂಗಳೂರು ಎಕ್ಸ್‌ಪ್ರೆಸ್ ರೈಲು ಢಿಕ್ಕಿ ಹೊಡೆದಿದೆ. ಮೃತದೇಹವನ್ನು ಕಾಞಂಗಾಡ್ ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಮೃತರು ಪತ್ನಿ, ಮಕ್ಕಳು ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page