ವಿಮಾನದಲ್ಲಿ ಸಿಗರೇಟ್ ಸೇದಿದ ಮಂಜೇಶ್ವರ ನಿವಾಸಿ ವಿರುದ್ಧ ಕೇಸು

ಮಂಗಳೂರು: ಭದ್ರತಾ ನಿರ್ದೇ ಶಗಳನ್ನು ಉಲ್ಲಂ ಘಿಸಿ ವಿಮಾನ ದಲ್ಲಿ ಸಿಗರೇಟ್ ಸೇದಿದ ಮಂಜೇ ಶ್ವರ ನಿವಾಸಿ ಮುಶಾದಿಕ್ ಹುಸೈನ್ (24)ನ ವಿರುದ್ಧ ಬಜ್ಪೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಆಗಸ್ಟ್ 31ರಂದು ಸಂಜೆ ಅಬುದಾಬಿಯಿಂದ ತಲುಪಿದ ಇಂಡಿಗೋ ವಿಮಾನದಲ್ಲಿ ಈ ಯುವಕ ಆಗಮಿಸಿದ್ದನು. ವಿಮಾನ ಇಳಿಯುವುದರ ಅಲ್ಪ ಮುಂಚೆ ಯುವಕ ವಿಮಾನದ ಬಾತ್ ರೂಂನಲ್ಲಿ ಸಿಗರೇಟ್ ಸೇದಿರುವುದಾಗಿ ದೂರಲಾಗಿದೆ.  ವಿಮಾನ ಅಧಿಕಾರಿಗಳು ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page